Advertisement

ಪ್ರತಿ ಗ್ರಾಪಂನಲ್ಲೂ ಲಸಿಕೆ ವಿತರಣೆ: ಆನಂದ

07:12 PM Jun 07, 2021 | Team Udayavani |

ಜಮಖಂಡಿ: ಕೊರೊನಾ ಎರಡನೇ ಅಲೆಯಲ್ಲಿ ಸೋಂಕಿತರ ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನಲ್ಲಿರುವ 45 ವರ್ಷದ ವಯೋಮಾನದವರಿಗೆ ಗ್ರಾಮೀಣ ಭಾಗದಲ್ಲಿ ಚುನಾವಣೆ ಬೂತ್‌ಗಳಲ್ಲಿ ಕೋವಾಕ್ಸಿನ್‌ ಮತ್ತು ಕೋವಿಶಿಲ್ಡ್‌ ಲಸಿಕೆ ನೀಡಲು ವ್ಯವಸ್ಥೆ ಮಾಡಲಾಗಿದೆ ಎಂದರು ಶಾಸಕ ಆನಂದ ನ್ಯಾಮಗೌಡ ಹೇಳಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ 26 ಗ್ರಾ.ಪಂ ಮತದಾನ ಮತಗಟ್ಟೆಗಳಲ್ಲಿ ಲಸಿಕೆ ನೀಡುವ ಕ್ರಿಯಾಯೋಜನೆ ಸಿದ್ಧಗೊಂಡಿದೆ. ಕಡಿಮೆ ಪ್ರಮಾಣ ಲಸಿಕೆ ಪಡೆದಿರುವ ಗ್ರಾಮಗಳಲ್ಲಿ ಲಸಿಕೆ ನೀಡುವ ಯೋಜನೆ ರೂಪಿಸಲಾಗಿದೆ. ಸೋಮವಾರ ತುಂಗಳ ಗ್ರಾಮದಲ್ಲಿ ಲಸಿಕೆ ವಿತರಣೆ ನಡೆಯಲಿದ್ದು, ಗ್ರಾಮಸ್ಥರು ಮತದಾನ ಬೂತ್‌ಗಳಲ್ಲಿ ಮಾಸ್ಕ್ ಧರಿಸಿಕೊಂಡು, ಸಾಮಾಜಿಕ ಅಂತರದೊಂದಿಗೆ ಸಾಲಾಗಿ ನಿಂತು ಲಸಿಕೆ ಪಡೆದುಕೊಳ್ಳಬೇಕು.

ತುಂಗಳ ಗ್ರಾ.ಪಂ ವ್ಯಾಪ್ತಿಯಲ್ಲಿ ಇನ್ನೂ ಅಂದಾಜು 1800 ಜನರಿಗೆ ಲಸಿಕೆ ನೀಡಬೇಕಾಗಿದೆ. ಅಲ್ಲಿ ಮುಗಿದ ನಂತರ ಬಿದರಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಜನರಿಗೆ ಲಸಿಕೆ ನೀಡಲಾಗುವುದು. ಲಸಿಕೆ ನೀಡುವ ಗ್ರಾಮದಲ್ಲಿ ಎರಡು ದಿನ ಮುಂಚೆ ಗ್ರಾ.ಪಂ ಸದಸ್ಯರು ಮತ್ತು ಪಿಕೆಪಿಎಸ್‌ ಆಡಳಿತ ಮಂಡಳಿ ಸದಸ್ಯರು, ಆಶಾ-ಅಂಗನವಾಡಿ ಕಾರ್ಯಕರ್ತೆಯರಿಂದ ಜಾಗೃತಿ ಜಾಥಾ ನಡೆಯಲಿದ್ದು, ಗ್ರಾಪಂನಿಂದ ಡಂಗೂರ ಸಾರಿ ಜನರಲ್ಲಿ ಅರಿವು ಮೂಡಿಸಲಾಗುವುದು ಎಂದರು. ಹೊಸದಾಗಿ ಪ್ರಥಮ ಹಂತದ ಲಸಿಕೆ ಪಡೆಯಲು ಆಗಮಿಸುವ ಜನರಿಗೆ ಎರಡು ತರಹದ ಲಸಿಕೆ ಕಾರ್ಡ್‌ ವಿತರಣೆ ಮಾಡಲಾಗುವುದು. ಅದರಲ್ಲಿ ಲಸಿಕೆಯ ಎಲ್ಲ ಸಮಗ್ರ ಮಾಹಿತಿ ನಮೂದಿಸಿ ಮುಂದಿನ ಲಸಿಕೆ ಪಡೆಯುವ ದಿನಾಂಕ, ಲಸಿಕೆ ಹೆಸರು ನಮೂದಿಸಲಾಗುತ್ತಿದೆ. ಇದರಿಂದ ಗ್ರಾಮಸ್ಥರಲ್ಲಿ ಯಾವುದೇ ಗೊಂದಲ ಉಂಟಾಗುವುದಿಲ್ಲ.

ಗ್ರಾಮೀಣ ಭಾಗದಲ್ಲಿ ಲಸಿಕೆ ಹಂಚಿಕೆ ಪೂರ್ಣಗೊಂಡ ನಂತರ ನಗರದ 31 ವಾರ್ಡ್‌ಗಳಲ್ಲಿ ಮತದಾನದ ಮತಗಟ್ಟೆಗಳಲ್ಲಿ ಲಸಿಕೆ ಯೋಜನೆ ಸಿದ್ಧವಾಗಲಿದೆ. 45 ವರ್ಷಕ್ಕಿಂತ ಹೆಚ್ಚಿನ ವಯೋಮಾನದವರು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕು. ಲಸಿಕೆ ಪಡೆದ ನಂತರ ಎರಡು ದಿನ ಜ್ವರ, ಮೈಕೈ ನೋವು ಕಾಣಿಸಿಕೊಳ್ಳತ್ತದೆ ಹೊರತು ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದರು.

ವಿಜ್ಞಾನಿಗಳು, ತತnರು ಕೊರೊನಾ 3ನೇ ಅಪ್ಪಳಿಸುವ ಎಲ್ಲ ಲಕ್ಷಣಗಳಿಗೆ ಎಂದು ತಿಳಿಸಿರುವಂತೆ ಹೆಚ್ಚಿನ ವ್ಯವಸ್ಥೆ ಮಾಡಲಾಗುತ್ತಿದೆ. 65 ಲಕ್ಷ ವೆಚ್ಚದಲ್ಲಿ ನಗರದ ಸರಕಾರಿ ಆಸ್ಪತ್ರೆಯಲ್ಲಿ 100 ಬೆಡ್‌ ಗಳಿಗೆ (ಒಂದು ನಿಮಿಷದಲ್ಲಿ) ಆಕ್ಸಿಜನ್‌ ಪೂರೈಕೆ ಕಾಮಗಾರಿ ಮಂಜೂರಾದ್ದು, ಆಗಸ್ಟ್‌ ತಿಂಗಳಲ್ಲಿ ಪೂರ್ಣಗೊಳ್ಳಲಿದೆ.

Advertisement

ಸಾವಳಗಿ ಮತ್ತು ಕೊಣ್ಣೂರ ಹೋಬಳಿ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶಾಸಕರ ಅನುದಾನದಲ್ಲಿ 1 ಕೋಟಿ ವೆಚ್ಚದಲ್ಲಿ 100ಕ್ಕೂ ಹೆಚ್ಚು ಬೆಡ್‌ಗಳಿಗೆ ಆಕ್ಸಿಜನ್‌ ಪೈಪ್‌ಲೈನ್‌ ಮಾಡಲಾಗುವದು. ನಮ್ಮ ಗ್ರಾಮೀಣ ಜನತೆಗೆ ಉತ್ತಮ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಶಾಸಕರ ಅನುದಾನದಲ್ಲಿ ನಿರ್ಮಿಸಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಇಂದಿನವರೆಗೆ 20226 ಜನರು ಲಸಿಕೆ ಪಡೆದುಕೊಳ್ಳಲಾಗಿದ್ದು, ಒಂದು ತಿಂಗಳ ಒಳಗಾಗಿ ಗ್ರಾಮೀಣ ಭಾಗದ ಜನರಿಗೆ ಲಸಿಕೆ ನೀಡಲಾಗುವದು ಎಂದರು.

ತಹಶೀಲ್ದಾರ್‌ ಪ್ರಶಾಂತ ಚನಗೊಂಡ ಮಾತನಾಡಿ, ತಾಲೂಕಿನಲ್ಲಿ ಪ್ರಥಮ ಹಂತದಲ್ಲಿ 25928 ಮತ್ತು ದ್ವಿತೀಯ ಹಂತದಲ್ಲಿ 4842 ಜನರು ಕೋವಿಶೀಲ್ಡ್‌ ಲಸಿಕೆ ಪಡೆದುಕೊಂಡಿದ್ದಾರೆ. ಪ್ರಥಮ ಹಂತದಲ್ಲಿ 5973 ಮತ್ತು ದ್ವಿತೀಯ ಹಂತದಲ್ಲಿ 3736 ಜನರು ಕೋವಾಕ್ಸಿನ್‌ ಲಸಿಕೆ ಪಡೆದುಕೊಂಡಿದ್ದಾರೆ. ಗ್ರಾಮೀಣ ಭಾಗದಲ್ಲಿ ಲಸಿಕೆ ಹಂಚಿಕೆಗಾಗಿ 20 ತಂಡಗಳನ್ನು ರಚಿಸಲಾಗಿದೆ. ತಾಲೂಕಿನ 26 ಗ್ರಾಮ ಪಂಚಾಯತಗಳಲ್ಲಿ ಬೂತ್‌ಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ಆರೋಗ್ಯ ಇಲಾಖೆಯ ಒಂದು ತಂಡ ಒಂದು ದಿನಕ್ಕೆ 100 ಜನರಿಗೆ ಲಸಿಕೆ ನೀಡುವ ಮೂಲಕ ಒಂದು ದಿನಕ್ಕೆ ಕನಿಷ್ಠ 2 ಸಾವಿರ ಜನರಿಗೆ ಲಸಿಕೆ ನೀಡಲಿದ್ದಾರೆ ಎಂದರು.

ತಾ.ಪಂ ಅಧಿ ಕಾರಿ ಅಬೀಬ ಗದ್ಯಾಳ, ಸರಕಾರಿ ಆಸ್ಪತ್ರೆ ವೈದ್ಯಾಧಿ ಕಾರಿ ಡಾ.ವೆಂಕಟರಾಜು, ಸಿಪಿಐ ಶಿವಯ್ಯ ಮಠಪತಿ, ಉಮೇಶ ಜೋಶಿ, ಸಿದ್ದು ಮೀಸಿ, ವರ್ಧಮಾನ ನ್ಯಾಮಗೌಡ, ರವಿ ಯಡಹಳ್ಳಿ, ಬಸವರಾಜ ಹರಕಂಗಿ ಸಹಿತ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next