Advertisement

ದಕ್ಷಿಣ ಕನ್ನಡ : ನಾಳೆಯಿಂದ ಜಿಲ್ಲೆಯಲ್ಲಿಲ್ಲ ಲಸಿಕಾ ಶಿಬಿರ

09:25 PM May 08, 2021 | Team Udayavani |

ಮಂಗಳೂರು : ಕೋವಿಡ್ ಲಸಿಕೆ ಖಾಲಿಯಾದ ಹಿನ್ನೆಲೆ ಜಿಲ್ಲೆಯಲ್ಲಿ ನಡೆಯುತ್ತಿರುವ ಕೋವಿಡ್ ಲಸಿಕಾ ಶಿಬಿರಕ್ಕೆ ನಾಳೆಯಿಂದ ( ಮೇ.09) ತಾತ್ಕಾಲಿಕವಾಗಿ ತಡೆ ನೀಡಲಾಗಿದೆ.

Advertisement

ಇಂದು ಈ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆ ಹೊರಡಿಸಿದ್ದು, ಜಿಲ್ಲೆಗೆ ಪೂರೈಕೆಯಾದ ಲಸಿಕೆಯನ್ನು ಫಲಾನುಭವಿಗಳಿಗೆ ನೀಡಲಾಗಿದೆ. ಸದ್ಯಕ್ಕೆ ಲಸಿಕಾ ಸಂಗ್ರಹ ಖಾಲಿಯಾಗಿದ್ದು, ನಾಳೆಯಿಂದ (ದಿನಾಂಕ 9-5 -2021 ರಿಂದ) ಯಾವುದೇ ಲಸಿಕ ಶಿಬಿರವನ್ನು ಜಿಲ್ಲೆಯಲ್ಲಿ ನಡೆಯುವುದಿಲ್ಲ .

ಜಿಲ್ಲೆಗೆ ಲಸಿಕೆ ಪೂರೈಕೆಯಾದ ನಂತರ ದಿನಾಂಕವನ್ನು ನಿಗದಿಪಡಿಸಿ ಕೋವಿಡ್ ನಿರೋಧಕ ಲಸಿಕೆ ನೀಡಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next