Advertisement

ಉಜ್ಭೇಕಿಸ್ತಾನ್ ಡ್ಯಾಂ ಒಡೆದು ಹೋಗಿ ಸಾವಿರಾರು ಮಂದಿ ಸ್ಥಳಾಂತರ; ಕ್ರಿಮಿನಲ್ ತನಿಖೆ ಆರಂಭ

08:18 AM May 04, 2020 | Nagendra Trasi |

ತಾಷ್ಕೆಂಟ್: ಸೈರ್ ಡೇರಿಯಾ ನದಿ ಪಾತ್ರದಲ್ಲಿ ನಿರ್ಮಿಸಿದ್ದ ಡ್ಯಾಂ ಒಡೆದು ಹೋದ ಪರಿಣಾಮ ಉಜ್ಬೇಕಿಸ್ತಾನ್ ಮತ್ತು ಕಝಕ್ ಸ್ತಾನ್ ನ ಸಾವಿರಾರು ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತಿದೆ ಎಂದು ವರದಿ ತಿಳಿಸಿದೆ. ನೂತನವಾಗಿ ಕಟ್ಟಿಸಿರುವ ಡ್ಯಾಂ ಒಡೆದು ಹೋದ ನಂತರ ಉಜ್ಭೇಕ್ ಸರ್ಕಾರ ಕ್ರಿಮಿನಲ್ ತನಿಖೆ ನಡೆಸುತ್ತಿದೆ.

Advertisement

ಡ್ಯಾಂ ಒಡೆದು ಹೋದ ಪರಿಣಾಮ ಉಜ್ಬೇಕಿಸ್ತಾನದ 22 ಗ್ರಾಮಗಳು ಜಲಾವೃತವಾಗಿದ್ದು, ಸುಮಾರು 70 ಸಾವಿರ ಜನರನ್ನು ಸ್ಥಳಾಂತರಿಸಲಾಗಿದೆ, 50ಸಾವಿರಕ್ಕೂ ಅಧಿಕ ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಾಷ್ಕೆಂಟ್ ಸರ್ಕಾರ ತಿಳಿಸಿದೆ. ಕಝಕ್ ನ್ ದಲ್ಲಿನ ದಕ್ಷಿಣ ಟುರ್ಕೆಸ್ತಾನ್ ಪ್ರಾಂತ್ಯದಲ್ಲಿನ ನಾಲ್ಕು ಗ್ರಾಮಗಳಲ್ಲಿ ಇರುವ 5,400 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ರಾಜ್ಯಪಾಲ ಉಮಿರ್ ಝಾಕ್ ಶುಕೇಯೇವ್ ತಿಳಿಸಿದ್ದಾರೆ.

ಗ್ರಾಮಗಳಲ್ಲಿ ತುಂಬಿರುವ ನೀರನ್ನು ಸ್ಥಳೀಯ ಲೇಕ್(ಸರೋವರ)ಗಳಿಗೆ ಡೈವರ್ಟ್ ಮಾಡುವ ಮೂಲಕ ನೀರಿನ ಪ್ರಮಾಣವನ್ನು ಇಳಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಉಜ್ಬೇಕ್ ಸರ್ಕಾರ ವಿವರಿಸಿದೆ. ದಕ್ಷಿಣ ಕಝಕ್ ಸ್ತಾನದಲ್ಲಿರುವ 600ಕ್ಕೂ ಅಧಿಕ ಮನೆಗಳು ಜಲಾವೃತಗೊಂಡಿದೆ.

ಉಜ್ಬೇಕಿಸ್ತಾನದ ಹಾಲಿ ಅಧ್ಯಕ್ಷ ಶೌಕತ್ ಮಿರಿಝಿಯೋವ್ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಈ ಡ್ಯಾಂ ಕಾಮಗಾರಿ ಆರಂಭಗೊಂಡಿತ್ತು. ಸತತ ಏಳು ವರ್ಷಗಳ ಕಾಮಗಾರಿ ನಂತರ 2017ರಲ್ಲಿ ಕೆಲಸ ಪೂರ್ಣಗೊಂಡಿತ್ತು. ಮೇ ಒಂದರಂದು ಸುರಿದು ಭಾರೀ ಗಾಳಿ ಮಳೆಗೆ ಡ್ಯಾಂ ಒಡೆದು ಹೋಗಿರುವುದಾಗಿ ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next