Advertisement

Uttarakhand: ಸಮಾನ ನಾಗರಿಕ ಸಂಹಿತೆ ಸ್ವೀಕಾರಕ್ಕೆ ಉತ್ತರಾಖಂಡ ಸಜ್ಜು

12:31 AM Feb 05, 2024 | Team Udayavani |

ಹೊಸದಿಲ್ಲಿ: ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿ ನಿಟ್ಟಿನಲ್ಲಿ ಉತ್ತರಾಖಂಡ ಸರಕಾರ ಮಹತ್ವದ ಹೆಜ್ಜೆ ಇರಿಸಿದೆ. ಮುಖ್ಯ ಮಂತ್ರಿ ಪುಷ್ಕರ್‌ ಸಿಂಗ್‌ ಧಮಿ ನೇತೃತ್ವದ ಉತ್ತರಾಖಂಡ ಸಚಿವ ಸಂಪುಟವು ರವಿವಾರ ಸಮಾನ ನಾಗರಿಕ ಸಂಹಿತೆ ಮಸೂದೆಗೆ ಒಪ್ಪಿಗೆ ನೀಡಿದ್ದು, ಮಂಗಳವಾರವೇ ವಿಧಾನಸಭೆ ಯಲ್ಲಿ ಇದನ್ನು ಮಂಡಿಸಲಾಗುತ್ತದೆ. ಇದು ಅಂಗೀ ಕಾರಗೊಂಡರೆ ಏಕರೂಪ ನಾಗರಿಕ ಸಂಹಿತೆ ಯನ್ನು ಅನುಷ್ಠಾನಗೊಳಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಉತ್ತರಾಖಂಡ ಪಾತ್ರವಾಗಲಿದೆ.

Advertisement

ಸರಕಾರವೇ ನೇಮಕ ಮಾಡಿದ್ದ ಉನ್ನತ ಮಟ್ಟದ ಸಮಿತಿಯು ಇತ್ತೀಚೆಗಷ್ಟೇ ಮಸೂದೆಯ ಕರಡನ್ನು ಮುಖ್ಯಮಂತ್ರಿ ಧಮಿ ಅವರಿಗೆ ಹಸ್ತಾಂತರಿಸಿತ್ತು. ವಿವಾಹ, ವಿಚ್ಛೇದನ, ಭೂಮಿ, ಆಸ್ತಿಪಾಸ್ತಿ ಮತ್ತು ಉತ್ತರಾಧಿಕಾರಕ್ಕೆ ಸಂಬಂಧಿಸಿ ಎಲ್ಲ ನಾಗರಿಕರಿಗೂ ಅನ್ವಯವಾಗುವಂತೆ ಏಕರೂಪದ ಕಾನೂನು ತರುವುದೇ ಈ ಮಸೂದೆಯ ಉದ್ದೇಶ ಎಂದು ಧಮಿ ನೇತೃತ್ವದ ಬಿಜೆಪಿ ಸರಕಾರ ತಿಳಿಸಿದೆ.

ಯುಸಿಸಿ ಕರಡು ಮಸೂದೆಯಲ್ಲೇನಿದೆ?
-ಹಲಾಲ್‌, ಇದ್ದತ್‌, ತ್ರಿವಳಿ ತಲಾಖ್‌ ಶಿಕ್ಷಾರ್ಹ ಅಪರಾಧ
– ಬಹುಪತ್ನಿತ್ವ ಪದ್ಧತಿಗೆ ನಿಷೇಧ
-ಮಕ್ಕಳ ಸಂಖ್ಯೆಯಲ್ಲಿ ಏಕರೂಪತೆ ಮುಂತಾದ ಜನಸಂಖ್ಯೆ ನಿಯಂತ್ರಣ ಉದ್ದೇಶದ ಕ್ರಮಗಳು
-ಲಿವ್‌ ಇನ್‌ ರಿಲೇಷನ್‌ಶಿಪ್‌ (ಸಹ ಜೀವನ) ನೋಂದಣಿ ಕಡ್ಡಾಯ
-ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೂ ಸಮಾನ ಪಾಲು
-ಯುಸಿಸಿ ವ್ಯಾಪ್ತಿಯಿಂದ ಬುಡಕಟ್ಟು ಸಮುದಾಯ ಹೊರಕ್ಕೆ

Advertisement

Udayavani is now on Telegram. Click here to join our channel and stay updated with the latest news.

Next