Advertisement

ಉತ್ತರಾಖಂಡದಲ್ಲಿ ಬಸ್ಸು ಕಂದಕಕ್ಕೆ ಬಿದ್ದು 13 ಮಂದಿಯ ಸಾವು

03:26 PM Mar 13, 2018 | Team Udayavani |

ತೋತಮ್‌, ಉತ್ತರಾಖಂಡ : ಇಲ್ಲಿನ ರಾಮನಗರ -ಅಲ್‌ಮಾರ್‌ ರಸ್ತೆಯಲ್ಲಿ ವೇಗವಾಗಿ ಸಾಗುತ್ತಿದ್ದ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ಕಂದಕ್ಕೆ ಬಿದ್ದು ಸಂಭವಿಸಿದ ಭೀಕರ ಅಪಘಾತದಲ್ಲಿ 13 ಜನರು ಮೃತಪಟ್ಟಿರುವುದಾಗಿ ವರದಿಯಾಗಿದೆ. ಬಸ್ಸಿನಲ್ಲಿ 24 ಜನರು ಇದ್ದರು. 

Advertisement

ಬಸ್ಸು ರಾಮನಗರದಿಂದ ಆಲ್‌ಮಾರ್‌ ನ ದೇವಘಾಟ್‌ ಕಡೆಗೆ ಸಾಗುತ್ತಿದ್ದಾಗ ಈ ಭೀಕರ ಅಪಘಾತ ಸಂಭವಿಸಿತೆಂದು ವರದಿಗಳು ತಿಳಿಸಿವೆ. 

ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಸೇರಿಸಲಾಗಿದೆ. ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮೃತರ ಬಗ್ಗೆ ಹೆಚ್ಚಿನ ವಿವರಗಳು ಇನ್ನೂ ಸಿಕ್ಕಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next