Advertisement

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

02:15 AM Jul 27, 2024 | Team Udayavani |

ಹೊಸದಿಲ್ಲಿ: ಕನ್ವರ್‌ ಯಾತ್ರಿಗಳು ಸಾಗುವ ದಾರಿಯಲ್ಲಿರುವ ಮಸೀದಿಗಳು ಕಾಣದಂತೆ ಮುಚ್ಚಿರುವ ಘಟನೆ ಉತ್ತರಾ ಖಂಡದ ಹರಿದ್ವಾರದಲ್ಲಿ ನಡೆದಿದೆ. ಈ ವಿವಾದ ತೀವ್ರ ಸ್ವರೂ ಪಕ್ಕೆ ತಿರುಗಿದ್ದರಿಂದ ಮುಚ್ಚಿರುವ ಪರದೆಗಳನ್ನು ತೆಗೆದು ಹಾಕ ಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಉತ್ತರಾಖಂಡ ಪ್ರವಾ ಸೋದ್ಯಮ ಸಚಿವ ಸತ್ಪಾಲ್‌ ಮಹಾರಾಜ್‌, ಕನ್ವರ್‌ ಯಾತ್ರೆ ಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆ ಯಲು ಮುನ್ನೆಚ್ಚರಿಕೆ ಕೈಗೊಳ್ಳಲಾಗಿತ್ತು ಎಂದಿದ್ದಾರೆ.

Advertisement

ಆದರೆ ಮಸೀದಿಗಳ ಮುಖ್ಯಸ್ಥರು ಮಾತ್ರ, ಕಳೆದ 40 ವರ್ಷಗಳಲ್ಲಿ ಈ ರೀತಿ ಯಾವತ್ತೂ ನಡೆದಿರಲಿಲ್ಲ ಎಂದಿದ್ದಾರೆ. ಈ ಮಧ್ಯೆ, ಕನ್ವರ್‌ ಯಾತ್ರೆಯ ಮಾರ್ಗದಲ್ಲಿರುವ ಅಂಗಡಿಗಳ ಮಾಲಕರ ಹೆಸರು ಪ್ರದರ್ಶನಕ್ಕೆ ನೀಡಲಾಗಿರುವ ಮಧ್ಯಾಂತರ ತಡೆಯಾಜ್ಞೆ ಯನ್ನು ಸುಪ್ರೀಂ ಕೋರ್ಟ್‌ ಮತ್ತೆ ವಿಸ್ತರಣೆ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next