Advertisement

Mangaluru ಉರ್ವ ಸ್ಟೋರ್‌: ಗ್ಯಾಸ್‌ ಸಿಲಿಂಡರ್‌ ಸೋರಿಕೆ: ಕಳಪೆ ಸಿಲಿಂಡರ್‌ ಕಾರಣ?

12:32 AM Aug 10, 2024 | Team Udayavani |

ಮಂಗಳೂರು: ನಗರದ ಉರ್ವಸ್ಟೋರ್‌ಬಸ್‌ ನಿಲ್ದಾಣ ಪಕ್ಕದ ಬಾರ್‌ನಲ್ಲಿ ಗ್ಯಾಸ್‌ ಸಿಲಿಂಡರ್‌ ಸೋರಿಕೆಯಾಗಿ ಭಾರೀ ಆತಂಕ ಸೃಷ್ಟಿಯಾದ ಘಟನೆ ಶುಕ್ರವಾರ ರಾತ್ರಿ ಸಂಭವಿಸಿತು.ವಾಣಿಜ್ಯ ಬಳಕೆಯ ದೊಡ್ಡ ಗಾತ್ರದ ಗ್ಯಾಸ್‌ ಸಿಲಿಂಡರ್‌ನ ತಳಭಾಗದಲ್ಲಿ ಏಕಾಏಕಿ ಸೋರಿಕೆ ಕಾಣಿಸಿಕೊಂಡಿತು.

Advertisement

ಕೂಡಲೇ ಕದ್ರಿ ಅಗ್ನಿಶಾಮಕ ದಳದವರು ಸ್ಥಳಕ್ಕಾಗಮಿಸಿ ಸುಮಾರು ಅರ್ಧ ತಾಸು ಕಾರ್ಯಾಚರಣೆ ನಡೆಸಿ ಸೋರಿಕೆಯನ್ನು ನಿಯಂತ್ರಿಸಿದರು. ಪಕ್ಕದಲ್ಲೇಬಸ್‌ ನಿಲ್ದಾಣ, ಅಂಗಡಿಗಳು, ವಸತಿ ಸಮುಚ್ಚಯಗಳಿದ್ದುದರಿಂದ ಅಗ್ನಿಶಾಮಕ ದಳದವರು ಅಕ್ಕಪಕ್ಕ ಎಚ್ಚರಿಕೆಯ ಸೂಚನೆ ನೀಡಿದ್ದರು. ಬಾರ್‌ನಲ್ಲಿದ್ದ ಸಿಬಂದಿ ಹಾಗೂ ಅಕ್ಕಪಕ್ಕದಲ್ಲಿದ್ದ ಸಾರ್ವಜನಿಕರನ್ನು ಸ್ಥಳದಿಂದ ದೂರ ಕಳುಹಿಸಲಾಯಿತು.

ಸಿಲಿಂಡರ್‌ ಗುಣಮಟ್ಟ ಕಳಪೆ ಯಾಗಿದ್ದರಿಂದ ಈ ರೀತಿಯಾಗಿದೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next