Advertisement

2017 ಕ್ಕಿಂತ ಮೊದಲು ಯುಪಿಯ ಯುವಕರಿಗೆ ಐಡೆಂಟಿಟಿ ಕ್ರೈಸಿಸ್ ಇತ್ತು: ಸಿಎಂ ಯೋಗಿ

02:18 PM Mar 02, 2023 | Team Udayavani |

ಲಕ್ನೋ: 2017 ಕ್ಕಿಂತ ಮೊದಲು ರಾಜ್ಯದ ಯುವಕರು ಐಡೆಂಟಿಟಿ ಕ್ರೈಸಿಸ್(ಗುರುತಿಸಿಕೊಳ್ಳುವಿಕೆಗೆ ಹಿಂಜರಿಕೆ) ನಿಂದ ಬಳಲುತ್ತಿದ್ದರು ಆದರೆ ಪರಿಸ್ಥಿತಿ ಬದಲಾಗಿದೆ ಮತ್ತು ಈಗ ಅವರು ರಾಜ್ಯಕ್ಕೆ ಸೇರಿದವರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗುರುವಾರ ಹೇಳಿದ್ದಾರೆ.

Advertisement

ರಾಜ್ಯ ವಿಧಾನ ಪರಿಷತ್ತಿನಲ್ಲಿ ಮಾತನಾಡಿದ ಸಿಎಂ ಯೋಗಿ, 2017 ರ ಮೊದಲು, ಉತ್ತರ ಪ್ರದೇಶದ ಯುವಕರಲ್ಲಿ ಗುರುತಿಸಿಕೊಳ್ಳುವಲ್ಲಿ ಬಿಕ್ಕಟ್ಟು ಇತ್ತು. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು, ಬಡವರು ಹಸಿವಿನಿಂದ ಬಳಲುತ್ತಿದ್ದರು, ಹಸಿವಿನಿಂದ ಸಾವುಗಳು ಸಂಭವಿಸಿವೆ ಮತ್ತು ಮಹಿಳೆಯರು ಸುರಕ್ಷಿತವಾಗಿರಲಿಲ್ಲ ಎಂದರು.

“ಹಿಂದೆ ಸಂಘಟಿತ ಅಪರಾಧದಲ್ಲಿ ತೊಡಗಿರುವವರು ಸಮಾನಾಂತರ ಸರಕಾರವನ್ನು ನಡೆಸುತ್ತಿದ್ದರು. ಅದು ಭೂಮಿಯಾಗಿರಲಿ, ಗಣಿಗಾರಿಕೆಯಾಗಿರಲಿ ಅಥವಾ ಅರಣ್ಯವೇ ಆಗಿರಲಿ ಎಲ್ಲಾ ರೀತಿಯ ಮಾಫಿಯಾಗಳು ಪ್ರವರ್ಧಮಾನಕ್ಕೆ ಬರುತ್ತಿವೆ ಎಂದರು.

ಕಳೆದ ಆರು ವರ್ಷಗಳಲ್ಲಿ ಪರಿಸ್ಥಿತಿ ಬದಲಾಗಿದೆ. ಈಗ ಯುವಕರು ಉತ್ತರ ಪ್ರದೇಶದವರು ಮತ್ತು ಇಲ್ಲಿ ಶಿಕ್ಷಣ ಪಡೆದವರು ಎಂದು ಹೆಮ್ಮೆಯಿಂದ ಹೇಳಬಹುದು. ಯುಪಿ ಈ ಬದಲಾವಣೆಯನ್ನು ಸಾಧ್ಯವಾಗಿಸಿದೆ ಎಂದ ಅವರು ಲಕ್ನೋದಲ್ಲಿ ನಡೆದ ಜಾಗತಿಕ ಹೂಡಿಕೆ ಶೃಂಗಸಭೆ ಮತ್ತು ಇತರ ಕಾರ್ಯಕ್ರಮಗಳನ್ನು ಉಲ್ಲೇಖಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next