Advertisement

ಕನ್ನಡದಲ್ಲಿ ಯುಪಿಎಸ್‌,ಕೆಪಿಎಸ್‌ ಪರೀಕ್ಷಾ ಮಾಹಿತಿಗಳ ಪುಸ್ತಕ ಪ್ರಕಟನೆ

06:20 AM Feb 19, 2018 | Team Udayavani |

ಬೆಂಗಳೂರು: ಕೇಂದ್ರ ಲೋಕಸೇವಾ ಆಯೋಗ ಮತ್ತು ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಪರೀಕ್ಷೆಗಳಿಗೆ ಕನ್ನಡದಲ್ಲಿ ಸಾಕಷ್ಟು ಮಾಹಿತಿ ಲಭ್ಯವಿಲ್ಲ. ಹಾಗಾಗಿ ಈ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ವಿಜ್ಞಾನ ವಿಷಯದ ಕನಿಷ್ಠ ಹತ್ತು ಪುಸ್ತಕಗಳನ್ನು ಕನ್ನಡದಲ್ಲಿ ಪ್ರಕಟಿಸುವ ಉದ್ದೇಶ ಹೊಂದಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ| ಮನು ಬಳಿಗಾರ್‌ ಹೇಳಿದ್ದಾರೆ.

Advertisement

ನಯನ ಸಭಾಂಗಣದಲ್ಲಿ ರವಿವಾರ ಹಮ್ಮಿಕೊಂಡಿದ್ದ ಡಾ|ಎಂ.ವೆಂಕಟಸ್ವಾಮಿಯವರ “ಕೋಲಾರದ ಚಿನ್ನದ ಗಣಿಗಳು’ ಕೃತಿಯ ಇಂಗ್ಲಿಷ್‌ ಅನುವಾದ ಮತ್ತು “ನಮ್ಮ ಭೂಮಿಯ ಹಾಡು ಪಾಡು’ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೇಂದ್ರ ಲೋಕಸೇವಾ ಆಯೋಗ ಮತ್ತು ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷೆಗಳಿಗೆ ಹಾಜರಾಗುವ ಕನ್ನಡಿಗರ ಸಂಖ್ಯೆ ಹೆಚ್ಚಾಗಿರಬಹುದು. ಆದರೆ ಕನ್ನಡ ಮಾಧ್ಯಮದವರು ನಿರೀಕ್ಷಿತ ಪ್ರಮಾಣದಲ್ಲಿ ತೇರ್ಗಡೆಯಾಗುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ಕನ್ನಡದಲ್ಲಿ ಮಾಹಿತಿ ಇಲ್ಲದಿರುವುದು. ಆದ್ದರಿಂದ ವಿಜ್ಞಾನ ವಿಷಯಗಳ ಬಗ್ಗೆ ಕನ್ನಡದಲ್ಲಿ ಪುಸ್ತಕ ಹೊರತರಲು  ಪರಿಷತ್‌ ಉದ್ದೇಶಿಸಿದೆ. ಲೇಖಕರು ಪುಸ್ತಕಗಳನ್ನು ಬರೆದುಕೊಟ್ಟರೆ ಪ್ರಕಟಿಸಲು ಸಿದ್ಧ ಎಂದು ಬಳಿಗಾರ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next