Advertisement

ಇಂದು ಉಪ್ಪೂರು ಡೈರಿ ಉದ್ಘಾಟನೆ

12:50 AM Jan 30, 2019 | Team Udayavani |

ಉಡುಪಿ : ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ, ಉಪ್ಪೂರು ಘಟಕವನ್ನು  ಜ. 29ರ ಬೆಳಗ್ಗೆ 10.30ಕ್ಕೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಉದ್ಘಾಟಿಸಲಿದ್ದಾರೆ.

Advertisement

ಆಧುನಿಕ ತಂತ್ರಜ್ಞಾನಗಳನ್ನೊಳಗೊಂಡ ಉಪ್ಪೂರಿನ ಡೈರಿಯನ್ನು ಸುಮಾರು  87.25 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಪ್ರಸ್ತುತ ಮಾರುಕಟ್ಟೆಯ ಬೇಡಿಕೆ ಪೂರೈಸಲು 1.5 ಲಕ್ಷ ಲೀ. ಸಾಮರ್ಥ್ಯದ ಡೈರಿಯ ಆವಶ್ಯಕತೆ ಇದೆ. ಮುಂದಿನ 5 ವರ್ಷಗಳ ಬೆಳವಣಿಗೆಯನ್ನು ಗಮನಿಸಿ ದಿನಕ್ಕೆ 2.5 ಲಕ್ಷ ಲೀ. ಸಾಮರ್ಥ್ಯ ಹೊಂದಿರುವ ಡೈರಿ ನಿರ್ಮಾಣ ಮಾಡಲಾಗಿದೆ.

ಪ್ರಸ್ತುತ ನಗರಕ್ಕೆ ಮಂಗಳೂರು ಡೈರಿಯಿಂದ ತಯಾರಿಯಾಗಿ ಸರಬರಾಜು ಆಗುತ್ತಿರುವ ಮೊಸರು, ತುಪ್ಪ, ಮಜ್ಜಿಗೆ, ಲಸ್ಸಿ  ಸೇರಿದಂತೆ ಇತರ ಉತ್ಪನ್ನಗಳು ಮುಂದಿನ ದಿನದಲ್ಲಿ ಉಪ್ಪೂರಿನ ಘಟಕದಲ್ಲಿ ಸಿದ್ಧವಾಗಿ ನೇರವಾಗಿ ಮಾರುಕಟ್ಟೆಯಲ್ಲಿ ದೊರೆಯಲಿದೆ.  

ದಿನಕ್ಕೆ 4.50 ಲಕ್ಷ  ಕೆಜಿ ಹಾಲು ಶೇಖರಣೆ
ಆರಂಭದಲ್ಲಿ ದಿನವೊಂದಕ್ಕೆ 4,500 ಲೀ. ಹಾಲನ್ನು ಮಾತ್ರ ಸಂಗ್ರಹಿಸುತ್ತಿದ್ದ ಒಕ್ಕೂಟ ಪ್ರಸ್ತುತ ಸಾಲಿನಲ್ಲಿ ದಿನಕ್ಕೆ ಸರಾಸರಿ 4.50 ಲಕ್ಷ ಕೆ.ಜಿ ಹಾಲು ಶೇಖರಿಸುತ್ತಿದೆ. ಹಾಲು ಮಾರಾಟವು 3.5 ಲಕ್ಷ ಲೀ. ದಾಟಿದೆ. ಜೂನ್‌ 2018ರಲ್ಲಿ ಒಕ್ಕೂಟವು 4.80 ಲಕ್ಷ ಕೆ.ಜಿ ಹಾಲು ಶೇಖರಿಸಿ ಸಾಧನೆ ಮಾಡಿದೆ.

ದ.ಕ. ಹಾಲು ಉತ್ಪಾದಕರ ಒಕ್ಕೂಟದಲ್ಲಿ 389 ಕೃತಕ ಗರ್ಭಧಾರಣಾ ಕೇಂದ್ರಗಳಿವೆ. ತಿಂಗಳೊಂದಕ್ಕೆ 22,992 ಹಸುಗಳಿಗೆ ಕೃತಕ ಗರ್ಭಧಾರಣೆ ಮಾಡಲಾಗುತ್ತದೆ. ಪಶುಗಳಿಗೆ ತುರ್ತು ವೈದ್ಯಕೀಯ ಸೌಲಭ್ಯವನ್ನು ಕಲ್ಪಿಸಲು ವಿಶೇಷ ಸೌಲಭ್ಯವನ್ನು ಕಲ್ಪಿಸಲಾಗಿದೆ. 

Advertisement

ಸದಸ್ಯರ ಬೇಡಿಕೆ ಅನುಸಾರ ಪ್ರತಿ ತಿಂಗಳಿಗೆ ಸರಾಸರಿ 6,130 ಮೆ. ಟನ್‌ ಪಶು ಆಹಾರವನ್ನು ವಿತರಿಸಲಾಗುತ್ತದೆ. ಅದಕ್ಕಾಗಿ ಮೇವು ಅಭಿವೃದ್ಧಿ ಹುಲ್ಲುಗಾವಲು ರಚನೆಯಾಗಿದೆ.

ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ಪೇಜಾವರ ಮಠದ ಕಿರಿಯ ಯತಿ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಸಚಿವರಾದ ಎಚ್‌.ಡಿ. ರೇವಣ್ಣ, ಬಂಡೆಪ್ಪ ಕಾಶೆಂಪುರ, ವೆಂಕಟರಾವ್‌ ನಾಡ ಗೌಡ, ಡಾ| ಜಯಮಾಲಾ, ಯು.ಟಿ. ಖಾದರ್‌, ವಿಧಾನಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಸಂಸದರಾದ ಶೋಭಾ ಕರಂದ್ಲಾಜೆ, ನಳಿನ್‌ ಕುಮಾರ್‌ ಕಟೀಲು ಅವರು ಉಪ್ಪೂರು ಡೈರಿಯ ವಿವಿಧ ಘಟಕಗಳನ್ನು ಉದ್ಘಾಟಿಸಲಿದ್ದಾರೆ, ಶಾಸಕ ರಘುಪತಿ ಭಟ್‌ ಅಧ್ಯಕ್ಷತೆ ವಹಿಸಲಿದ್ದಾರೆ  ಎಂದು ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next