Advertisement

Uppinangady ವೃದ್ಧೆಯ ಸರ ಕಸಿಯಲು ಯತ್ನ

12:04 AM Jul 16, 2024 | Team Udayavani |

ಉಪ್ಪಿನಂಗಡಿ: ವೃದ್ಧೆಯೋರ್ವರ ಚಿನ್ನದ ಸರ ಕಸಿಯಲು ಯತ್ನಿಸಿದ ಘಟನೆ ಶಿರಾಡಿ ಗ್ರಾಮದ ಅಡ್ಡಹೊಳೆ ಬಳಿ ಸಂಭವಿಸಿದೆ.

Advertisement

ಮಂಗಳೂರು ಕಡೆಯಿಂದ ಬೆಂಗಳೂರು ಕಡೆ ಬೈಕ್‌ನಲ್ಲಿ ಸಾಗುತ್ತಿದ್ದ ಇಬ್ಬರು ಅಡ್ಡಹೊಳೆ ಸಮೀಪದ ಮಿನಿ ಕ್ಯಾಂಟಿನ್‌ಗೆ ತೆರಳಿ ಚಹಾ ಕೇಳುವ ನೆಪದಲ್ಲಿ ತ್ರೇಸಿಯಮ್ಮ (65) ಅವರ ಕತ್ತಿನಲ್ಲಿದ್ದ ಸರ ಎಳೆದಾಗ ಬೊಬ್ಬೆ ಹಾಕಿದರು.

ಕಳ್ಳರು ಓಡುವ ವೇಳೆ ಸರ ಬಿದ್ದಿದ್ದು, ಬಳಿಕ ಗುಂಡ್ಯ ಚೆಕ್‌ ಪೋಸ್ಟ್‌ಗೆ ಮಾಹಿತಿ ನೀಡಲಾಗಿದ್ದು, ಅಲ್ಲಿ ಪೊಲೀಸರು ಮತ್ತು ಸಾರ್ವ ಜನಿಕರು ಯುವಕರನ್ನು ಹಿಡಿದು ನೆಲ್ಯಾಡಿ ಠಾಣೆಗೆ ಹಸ್ತಾಂತರಿಸಿದರು. ಬಂಧಿತರು ಯಶವಂತಪುರದ ರೋಹಿತ್‌ ಮತ್ತು ಅಶೋಕ್‌ ಎನ್ನಲಾಗಿದೆ. ತನಿಖೆ ನಡೆಯುತ್ತಿದೆ.

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next