Advertisement

Uppala ನಾಪತ್ತೆಯಾಗಿದ್ದ ಪತ್ರಕರ್ತ ನ್ಯಾಯಾಲಯದಲ್ಲಿ ಶರಣು

09:53 PM Feb 06, 2024 | Team Udayavani |

ಉಪ್ಪಳ: ನಿಗೂಢ ಸ್ಥಿತಿಯಲ್ಲಿ ನಾಪತ್ತೆಯಾಗಿದ್ದ ಪ್ರಾದೇಶಿಕ ಪತ್ರಕರ್ತ ನ್ಯಾಯಾಲಯದಲ್ಲಿ ಹಾಜರಾಗಿದ್ದಾರೆ. ಇದೇ ವೇಳೆ ಸಹೋದರನಿಂದ ಬೆದರಿಕೆಯಿದೆಯೆಂದು ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ನ್ಯಾಯಾಲಯದ ನಿರ್ದೇಶ ಪ್ರಕಾರ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ.

Advertisement

ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಧರ್ಮತ್ತಡ್ಕದ ಜೋನ್‌ ಡಿ’ಸೋಜಾ (60) ಕಾಸರಗೋಡು ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ಹಾಜರಾಗಿದ್ದಾರೆ. ಸೊತ್ತು ತರ್ಕದ ಹಿನ್ನೆಲೆಯಲ್ಲಿ ಸಹೋದರ ಜಾರ್ಜ್‌ ಹಾಗೂ ಚಿಕ್ಕಪ್ಪನ ಪುತ್ರ ಥೋಮಸ್‌ನಿಂದ ತನಗೆ ಬೆದರಿಕೆಯಿರುವುದಾಗಿಯೂ, ಇದರಿಂದ ಭಯಗೊಂಡು ತಾನು ನಾಪತ್ತೆಯಾಗಿರುವುದಾಗಿ ಜೋನ್‌ ಡಿ’ಸೋಜಾ ನ್ಯಾಯಾಲಯದಲ್ಲಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ನಿರ್ದೇಶದಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ನ್ಯಾಯಾಲಯಕ್ಕೆ ಹಾಜರಾದ ಜೋನ್‌ ಡಿ’ಸೋಜಾ ಅವರನ್ನು ಮನೆಯವರೊಂದಿಗೆ ಕಳುಹಿಸಿಕೊಡಲಾಗಿದೆ.

ಕುಸಿದು ಬಿದ್ದು
ಯುವಕನ ಸಾವು
ಕಾಸರಗೋಡು: ಹನ್ನೊಂದು ದಿನಗಳ ಹಿಂದೆ ಕೊಲ್ಲಿಯಿಂದ ಊರಿಗೆ ಬಂದಿದ್ದ ಕಾಂಞಂಗಾಡ್‌ ಮೀನಾಫೀಸ್‌ ಪರಿಸರದ ನಿವಾಸಿ ನಜೀಬ್‌ (40) ಕುಸಿದು ಬಿದ್ದು ಸಾವಿಗೀಡಾದರು. ಕುಸಿದು ಬಿದ್ದ ತತ್‌ಕ್ಷಣ ಆಸ್ಪತ್ರೆಗೆ ಸಾಗಿಸಿದರೂ ರಕ್ಷಿಸಲು ಸಾಧ್ಯವಾಗಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next