Advertisement

ಈಸ್ಟರ್ನ್ ಬ್ಲೂಸ್‌ ಕೆಎಸ್‌ಎ ತಂಡಕ್ಕೆ ಯುಪಿಎಲ್‌-2 ಕ್ರಿಕೆಟ್‌ ಟ್ರೋಫಿ

01:50 PM Apr 26, 2017 | Karthik A |

ಪಣಂಬೂರು: ಪಣಂಬೂರಿನ ಎನ್‌ಎಂಪಿಟಿ ಮೈದಾನದಲ್ಲಿ ಆಯೋಜಿಸಲಾದ ಎಸ್‌ಎಬಿ ಯುಪಿಎಲ್‌ ಟಿ-10 ಕ್ರಿಕೆಟ್‌ ಪಂದ್ಯಾಟದಲ್ಲಿ ಯಶ್‌ ಬೈಸಿಯಾ ಲಯನ್ಸ್‌ ಓಮನ್‌ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿದ ಈಸ್ಟರ್ನ್ ಬ್ಲೂಸ್‌ ಕೆಎಸ್‌ಎ ತಂಡ ಪ್ರಶಸ್ತಿ ಹಾಗೂ 25 ಲಕ್ಷ ರೂ. ನಗದು ಬಹುಮಾನ ಗೆದ್ದಿದೆ. ಮೊದಲು ಬ್ಯಾಟಿಂಗ್‌ ನಡೆಸಿದ ಓಮನ್‌ ತಂಡ 8.5 ಓವರ್‌ಗಳಲ್ಲಿ 54 ರನ್ನಿಗೆ ತನ್ನೆಲ್ಲ ವಿಕೆಟ್‌ ಕಳೆದುಕೊಂಡಿತು. ಉತ್ತರವಾಗಿ ಈಸ್ಟರ್ನ್ ಬ್ಲೂಸ್‌ 6.2 ಓವರ್‌ಗಳಲ್ಲಿ ಎರಡು ವಿಕೆಟ್‌ ನಷ್ಟಕ್ಕೆ 55 ರನ್‌ ಗಳಿಸಿ ಜಯಭೇರಿ ಮೊಳಗಿಸಿತು. ಈಸ್ಟರ್ನ್ ಬ್ಲೂಸ್‌ನ ಸುನೀಲ್‌ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.

Advertisement

ಈಸ್ಟರ್ನ್ ಬ್ಲೂಸ್‌ನ  ಫ‌ವಾಜ್‌ ಒಟ್ಟು 88 ಸೆತಗಳಲ್ಲಿ 164 ರನ್‌ ಗಳಿಸುವ ಮೂಲಕ ಕೂಟದ ಮೌಲ್ಯಯುತ ಆಟಗಾರರಾಗಿ ಆಯ್ಕೆಯಾಗಿದ್ದು, ಹುಂಡೈ ಇಯಾನ್‌ ಕಾರನ್ನು ತಮ್ಮದಾಗಿಸಿಕೊಂಡರು. ಇದೇ ತಂಡದ ಸೌರಭ್‌ ಒಟ್ಟು 15 ವಿಕೆಟ್‌ ಪಡೆದು ಉತ್ತಮ ಬೌಲರ್‌, ಓಮನ್‌ ತಂಡದ ಭೂಷಣ್‌ ಪಾಟೀಲ್‌ ಉತ್ತಮ ಬ್ಯಾಟ್ಸ್‌ಮ್ಯಾನ್‌ ಆಗಿ ಬಜಾಜ್‌ ಬೈಕ್‌ ಪಡೆದರು (111 ರನ್‌).

ಸಮಾರೋಪ ಸಮಾರಂಭ
ಸಮಾರೋಪ ಸಮಾರಂಭದಲ್ಲಿ ಶಾಸಕ ಮೊದಿನ್‌ ಬಾವಾ, ಉದ್ಯಮಿ, ಯುಪಿಎಸ್‌ ಎರಡನೇ ಆವೃತ್ತಿ ಉಪಾಧ್ಯಕ್ಷ ಮೊಹಮ್ಮದ್‌ ಮುಬೀನ್‌, ಕಾಪು ಮಾಜಿ ಶಾಸಕ ಲಾಲಾಜಿ ಮೆಂಡನ್‌, ಉದ್ಯಮಿ ವಹೀದ್‌ ಹೈದರ್‌, ಅನ್ಸಫ್ ಆಲಿ, ತೀರ್ಥಹಳ್ಳಿ ಸಿಟಿ ಕ್ರಿಕೆಟ್‌ ಕ್ಲಬ್‌ ಅಧ್ಯಕ್ಷ ಅಬ್ದುಲ್‌ ಕಲಾಂ ಆಜಾದ್‌, ಉದ್ಯಮಿ ಸಯ್ಯದ್‌ ರಿಜ್ವಾನ್‌, ಉದ್ಯಮಿ ಯೂನಿಸ್‌, ಮಹಮ್ಮದ್‌ ಶರೀಫ್ ಮಣಿಪಾಲ್‌, ಅಬೂಬಕ್ಕರ್‌, ಮೊಹಮ್ಮದ್‌ ಹ್ಯಾರೀಸ್‌ ಬೆಂಗಳೂರು, ಇಕ್ಬಾಲ್‌ ಕಾವೂರು, ನಟಿ ಸ್ವಾತಿ ಬಂಗೇರ, ಉಡುಪಿ ಕ್ರಿಕೆಟ್‌ ಕ್ಲಬ್‌ ಹಾಗೂ ಯುಪಿಎಲ್‌ ಸೀಸ್‌ನ್‌ 2 ಅಧ್ಯಕ್ಷ ಸಾದಿಕ್‌ ಕಾಪು ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next