Advertisement

ಉಪೇಂದ್ರ ಹೊಸ ಚಿತ್ರ “ಉಪ್ಪಿರುಪಿ’

11:07 AM Jan 03, 2017 | Team Udayavani |

ನೋಟ್‌ ಬ್ಯಾನ್‌ ಸಮಯದಲ್ಲಿ ಉಪೇಂದ್ರ ಸಹ ಸುದ್ದಿಯಾದರು. ಅದಕ್ಕೆ ಕಾರಣ ಅವರ ತಲೆಯಲ್ಲೂ ಇಂತಹ ಒಂದು ಆಲೋಚನೆ ಇತ್ತು. ಸಂದರ್ಶನವೊಂದರಲ್ಲಿ ನೋಟುಗಳನ್ನು ಬ್ಯಾನ್‌ ಮಾಡುವ ಹಾಗೂ ಪ್ಲಾಸ್ಟಿಕ್‌ ನೋಟುಗಳನ್ನು ತರುವ ಬಗ್ಗೆ ಮಾತನಾಡಿದ್ದರು. ಇಂತಿಪ್ಪ ಉಪ್ಪಿ ಈಗ ರುಪಿ ಜೊತೆಗಿದ್ದಾರೆ! ಏನಿದು ಎಂದು ಕನ್‌ಫ್ಯೂಸ್‌ ಆಗಬೇಡಿ. ಇದು ಉಪೇಂದ್ರ ಅವರ ಹೊಸ ಸಿನಿಮಾದ ಸುದ್ದಿ.

Advertisement

ಹೌದು, ಉಪೇಂದ್ರ ಅವರ ಹೊಸ ಸಿನಿಮಾಕ್ಕೆ ಇತ್ತೀಚೆಗೆ ಮುಹೂರ್ತ ನಡೆದಿರೋದು ನಿಮಗೆ ಗೊತ್ತೇ ಇದೆ. ಮಾದೇಶ ನಿರ್ದೇಶನದ ಈ ಚಿತ್ರಕ್ಕೆ ಟೈಟಲ್‌ ಆಗಿರಲಿಲ್ಲ. ಈಗ ಚಿತ್ರಕ್ಕೆ ಟೈಟಲ್‌ ಅಂತಿಮವಾಗಿದೆ. ಅದು “ಉಪ್ಪಿರುಪಿ’. “ಉಪ್ಪಿರುಪಿ’ ಎಂದರೆ ಏನು? ಚಿತ್ರದ ಕ‌ಥೆಗೂ ಟೈಟಲ್‌ಗ‌ೂ ಏನು ಸಂಬಂಧ ಎಂದು ನೀವು ಕೇಳಿದರೆ ಅದಕ್ಕೆ ಉತ್ತರವಿಲ್ಲ.

ಏಕೆಂದರೆ ನಿರ್ದೇಶಕ ಮಾದೇಶ ಚಿತ್ರದ ಕಥೆಯ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಡುವುದಿಲ್ಲ. ಆದರೆ, ಟೈಟಲ್‌ನ ಸುತ್ತ ಹಳೆಯ ಒಂದು ಸಾವಿರ ಹಾಗೂ ಹೊಸ ಎರಡು ಸಾವಿರ ರೂಪಾಯಿ ನೋಟುಗಳನ್ನು ಕೂಡಾ ಇಟ್ಟಿದ್ದು, ಏನಿರಬಹುದೆಂಬ ಕುತೂಹಲವಂತೂ ಅನೇಕರಿಗಿದೆ.  ಇದು ವಿಜಯಲಕ್ಷ್ಮೀ ಅರಸ್‌ ಅವರ ಕಥೆ. ಕಥೆಯ ಜೊತೆಗೆ ನಿರ್ಮಾಣ ಕೂಡಾ ಅವರದ್ದೇ.

ಉಪೇಂದ್ರ ಅವರ ಶೈಲಿಗೆ ಹೊಂದಿಕೆಯಾಗುವಂತಹ ಕಥೆಯಾಗಿದ್ದು, ಆ ಕಥೆಗೆ “ಉಪ್ಪಿರುಪಿ’ ಟೈಟಲ್‌ ಕೂಡಾ ಹೊಂದುತ್ತದೆಂಬ ಕಾರಣಕ್ಕೆ ಇಡಲಾಗಿದೆ. ಕಥೆಯಲ್ಲಿ ಇಂದಿನ ಕಾಲಘಟ್ಟಕ್ಕೆ ಹೊಂದಿಕೆಯಾಗುವಂತಹ ಸಾಕಷ್ಟು ಅಂಶಗಳಿವೆಯಂತೆ. ಅಂದಹಾಗೆ, ಈ ಚಿತ್ರದಲ್ಲಿ ಉಪೇಂದ್ರ ಜೊತೆ ರಚಿತಾ ರಾಮ್‌ ನಾಯಕಿಯಾಗಿ ನಟಿಸುತ್ತಿದ್ದಾರೆ. ಚಿತ್ರದ ನಿರ್ಮಾಪಕರು ಸೌಮ್ಯ ಸ್ವಭಾವದ ನಾಯಕಿಯ ಪಾತ್ರಕ್ಕೆ ಹುಡುಕಾಟ ನಡೆಸುತ್ತಿದ್ದಾಗ ಕಣ್ಣಿಗೆ ಬಿದ್ದಿದ್ದು ರಚಿತಾ ರಾಮ್‌ ಅಂತೆ.

ಚಿತ್ರವನ್ನು ವೆಸ್ಟ್‌ಇಂಡೀಸ್‌ನಲ್ಲಿ ಚಿತ್ರೀಕರಿಸುವ ಯೋಚನೆಯೂ ನಿರ್ಮಾಪಕರಿಗಿದೆ. ಚಿತ್ರಕ್ಕೆ ಸಾಧುಕೋಕಿಲ ಸಂಗೀತ, ರಾಜೇಶ್‌ ಕಟ್ಟ ಛಾಯಾಗ್ರಹಣವಿದೆ. ಅಂದಹಾಗೆ, ಉಪೇಂದ್ರ ಅವರ ಮತ್ತೂಂದು ಚಿತ್ರ “ಕನ್ನೇಶ್ವರ’ಕ್ಕೂ ಇತ್ತೀಚೆಗೆ ಮುಹೂರ್ತ ನಡೆದಿದ್ದು, ಕೆಲ ದಿನಗಳ ಚಿತ್ರೀಕರಣ ಕೂಡಾ ನಡೆದಿದೆ. ಈ ನಡುವೆಯೇ ಉಪ್ಪಿಯ “ಉಪೇಂದ್ರ ಹುಟ್ಟಿ ಬಾ’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next