Advertisement

ಐಟಿ ದಾಳಿ ಬಗ್ಗೆ ಉಪ್ಪಿ ಟ್ವೀಟ್‌

12:04 PM Aug 05, 2017 | |

ಬೆಂಗಳೂರು: ಇಂದನ ಸಚಿವ ಡಿ.ಕೆ.ಶಿವಕುಮಾರ್‌ ಮೇಲೆ ನಡೆಯುತ್ತಿರುವ ಐಟಿ ದಾಳಿಯ ಕುರಿತು ನಟ ಉಪೇಂದ್ರ ತಮ್ಮದೇ ದಾಟಿಯಲ್ಲಿ ಟ್ವೀಟ್‌ ಮಾಡಿದ್ದಾರೆ. ರಾಜಕೀಯ ವ್ಯಕ್ತಿಗಳ ಮೇಲೆ ದಾಳಿ ನಡೆಸಿದಾಗ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಚಿತ್ರೀಕರಣ ಮಾಡಿ ಏಕೆ ಪ್ರಕಟಿಸುವುದಿಲ್ಲ?

Advertisement

ಇದರ ಸತ್ಯಾಸತ್ಯತೆ ಬಗ್ಗೆ ತಿಳಿದುಕೊಳ್ಳುವ ಅಧಿಕಾರ ಜನರಿಗೆ ಇದೆ. ರಾಜಕಾರಣ, ರಾಜಕೀಯ, ರಾಜನೀತಿ ನಮಗೆ ಬೇಡ. ನಮಗೆ ಬೇಕಿರುವುದು ಪ್ರಜಾಕಾರಣ, ಪ್ರಜಾಕೀಯ, ಪ್ರಜಾನೀತಿ. “ನೋ ರಾಜ “ಕೀ’ ಯ. ಯೇಸ್‌ ಪ್ರಜಾ “ಕೀ’ ಯ. ಪ್ರಜಾಪ್ರಭುತ್ವದ “ಕೀ’ ಪ್ರಜೆಗಳ ಬಳಿ ಇರಬೇಕೆ ಹೊರತು ರಾಜನ ಬಳಿ ಅಲ್ಲ ಎಂದು ಮಾರ್ಮಿಕವಾಗಿ ಟ್ವೀಟಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next