Advertisement

ಪ್ರಧಾನಿ ಮೋದಿ ಸಚಿವ ಸಂಪುಟಕ್ಕೆ ಉಪೇಂದ್ರ ಕುಶವಾಹ ರಾಜೀನಾಮೆ

03:39 PM Dec 10, 2018 | udayavani editorial |

ಹೊಸದಿಲ್ಲಿ : ಬಿಜೆಪಿ ನೇತೃತ್ವದ ಆಳುವ ಎನ್‌ಡಿಎ ಸರಕಾರಕ್ಕೆ ದೊಡ್ಡ ಹಿನ್ನಡೆ ಎನ್ನುವ ರೀತಿಯಲ್ಲಿ ರಾಷ್ಟ್ರೀಯ ಲೋಕ ಸಮತಾ ಪಕ್ಷದ (ಆರ್‌ಎಲ್‌ಎಸ್‌ಪಿ) ನೇತಾರ ಉಪೇಂದ್ರ ಕುಶವಾಹ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ.

Advertisement

ಕುಶವಾಹ ಅವರ ರಾಜೀನಾಮೆಯನ್ನು ದೃಢೀಕರಿಸಿ ವರದಿ ಮಾಡಿರುವ ಎಎನ್‌ಐ, 2019ರ ಲೋಕಸಭಾ ಸೀಟುಗಳ ಹಂಚಿಕೆಯ ವಿಚಾರದಲ್ಲಿನ ಅಸಮಾಧಾನವೇ ಕುಶವಾಹ ಅವರ ರಾಜೀನಾಮೆಗೆ ಕಾರಣವೆಂದು ಹೇಳಿದೆ.

ಕುಶವಾಹ ಅವರು ತಮ್ಮ ರಾಜೀನಾಮೆ ಪತ್ರವನ್ನು ಪ್ರಧಾನಿ ಕಾರ್ಯಾಲಯಕ್ಕೆ ಅನುಮೋದನೆಗಾಗಿ ಕಳುಹಿಸಿಕೊಟ್ಟಿರುವುದಾಗಿ ವರದಿ ತಿಳಿಸಿದೆ.

ಬಿಜೆಪಿ ನೇತೃತ್ವದ ಎನ್‌ಡಿಎ ಜತೆಗಿನ ಸಂಬಂಧಗಳನ್ನು ಆರ್‌ಎಲ್‌ಎಸ್‌ಪಿ ಶೀಘ್ರವೇ ಕಡಿದುಕೊಳ್ಳುವುದರ ಸೂಚನೆ ಇದಾಗಿದೆ ಎಂದು ಮೂಲಗಳು ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next