Advertisement

ಪತಿಯನ್ನು ಕೊಲೆ ಮಾಡಿದ್ದಾರೆಂದು ಸಂಬಂಧಿಕರನ್ನು ಜೈಲುಗಟ್ಟಿದ ಮಹಿಳೆಯೇ ಅರೆಸ್ಟ್; ಆಗಿದ್ದೇನು?

02:34 PM Dec 26, 2023 | Team Udayavani |

ಲಕ್ನೋ: ಗಂಡನನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ, ಸಂಬಂಧಿಕರನ್ನು ಜೈಲಿಗಟ್ಟಿದ ಮಹಿಳೆಯನ್ನು ಪೊಲೀಸರು ಬಂಧಿಸಿರುವ ಘಟನೆ ಉತ್ತರ ಪ್ರದೇಶದ ಗೊಂಡದಲ್ಲಿ ನಡೆದಿದೆ.

Advertisement

ಘಟನೆ ವಿವರ: ಗುಡಿಯಾ ಎನ್ನುವ ಮಹಿಳೆ ಕಳೆದ 6 ತಿಂಗಳ ಹಿಂದೆ ಮಾವ ನಾಂಕೆ ಮತ್ತು ಸೋದರಮಾವರಾದ ಅರ್ಜುನ್, ಶ್ಯಾಮ್ ಮತ್ತು ಅಗ್ಯಾರಾಮ್ ಅವರ ಮೇಲೆ ಕೊಲೆ ಮಾಡಿದ ಆರೋಪವನ್ನು ಮಾಡಿ ದೂರು ದಾಖಲಿಸಿದ್ದರು. ಇವರು ತನ್ನ ಪತಿ ರಾಮಕರಣ್‌ ನನ್ನು ಕೊಲೆ ಮಾಡಿ ಸಾಕ್ಷಿ ಮರೆಮಾಚಲು ಶವವನ್ನು ಎಲ್ಲೋ ವಿಲೇವಾರಿ ಮಾಡಿದ್ದಾರೆ ಎಂದು ಆರೋಪಿಸಿ ಪೊಲೀಸರಲ್ಲಿ ದೂರು ದಾಖಲಿಸಿದ್ದರು.

ಪ್ರಕರಣ ಸಂಬಂಧ ಪೊಲೀಸರು ಜೂನ್ 5 ರಂದು ನ್ಯಾಯಾಲಯದ ಆದೇಶದ ನಂತರ ಆರೋಪಿಗಳನ್ನು ಕಸ್ಟಡಿಗೆ ತೆಗೆದುಕೊಳ್ಳಲಾಯಿತು.  ಆ ಬಳಿಕ ಪ್ರಕರಣದ ಬಗ್ಗೆ ವಿವರವಾದ ತನಿಖೆಯನ್ನು ಆರಂಭಿಸಿದ್ದರು.

ಸುಳ್ಳಿನ ಕಥೆ ಕಟ್ಟಿದ ದಂಪತಿ:  ತನಿಖೆಯನ್ನು ಆರಂಭಿಸಿದ ಪೊಲೀಸರಿಗೆ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಕೊಲೆಯಾಗಿದ್ದಾನೆ ಎನ್ನಲಾದ ಮಹಿಳೆ ಪತಿ ರಾಮಕರಣ್‌ ಜೀವಂತವಾಗಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಕೊಲೆಯ ನಾಟಕವನ್ನು ಗುಡಿಯಾ ಹಾಗೂ ರಾಮಕರಣ್‌ ಸೇರಿಕೊಂಡು ಮಾಡಿದ್ದಾರೆ. ಆಸ್ತಿಯನ್ನು ಕಬಳಿಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ರೂಪಿಸಲಾಗಿದೆ ಎಂದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.

ರಾಮಕರಣ್‌ ನನ್ನು ಪಶ್ಚಿಮ ರಾಜ್ಯದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ದಂಪತಿಯ ಯೋಜನೆ ಮತ್ತು ಅವರು ಹೇಗೆ ಸುಳ್ಳು ಪ್ರಕರಣ ದಾಖಲಿಸಿ, ಪೊಲೀಸರನ್ನು ದಾರಿತಪ್ಪಿಸಿದ್ದಾರೆ ಎಂಬುದರ ಕುರಿತು ಪೊಲೀಸರು ನ್ಯಾಯಾಲಯಕ್ಕೆ ವರದಿಯನ್ನು ಸಲ್ಲಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

“ದಂಪತಿಗಳನ್ನು ವಿಚಾರಣೆಗೊಳಪಡಿಸಿದಾಗ, ಕುಟುಂಬದ ಆಸ್ತಿಗಾಗಿ ರಾಮ್ ಕರಣ್ ಮತ್ತು ಅವರ ಸಹೋದರರ ನಡುವೆ ತಕರಾರು ಇತ್ತು. ಆಸ್ತಿಯನ್ನು ಹೇಗಾದರೂ ಮಾಡಿ ಕಬಳಿಸುವ ಬೇಕೆನ್ನುನ ನಿಟ್ಟಿನಲ್ಲಿ ಇಬ್ಬರು ಸೇರಿ ಈ ಯೋಜನೆಯನ್ನು ಮಾಡಿರುವುದಾಗಿ ಪೊಲೀಸರ ವಿಚಾರಣೆಯಲ್ಲಿ ದಂಪತಿ ಹೇಳಿದ್ದಾರೆ.

ಸದ್ಯ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next