Advertisement

ರವಿದಾಸ ಜಯಂತಿಯಲ್ಲಿ ಗುಂಪು ಘರ್ಷಣೆ: ಇಬ್ಬರ ಸಾವು

05:38 PM Feb 01, 2018 | udayavani editorial |

ಮೌ, ಉತ್ತರ ಪ್ರದೇಶ : ಇಲ್ಲಿನ ರಾಣಿಪುರ ಪ್ರದೇಶದಲ್ಲಿನ ಗೋಕುಲಪುರ ಗ್ರಾಮದಲ್ಲಿ  ರವಿದಾಸ ಜಯಂತಿಯಂದು ಎರಡು ಗುಂಪುಗಳ ನಡುವೆ ನಡೆದ ಕಾಳಗದಲ್ಲಿ ಓರ್ವ ಮಹಿಳೆ ಸೇರಿದಂತೆ ಇಬ್ಬರು ಕೊಲ್ಲಲ್ಪಟ್ಟು ಇತರ ಆರು ಮಂದಿ ಗಾಯಗೊಂಡ ಘಟನೆ ವರದಿಯಾಗಿದೆ.

Advertisement

ನಿನ್ನೆ ಬುಧವಾರ ರಾತ್ರಿ ಈ ಘಟನೆ ನಡೆಯಿತು. ಇಬ್ಬರು ಯುವಕರು ಕುಡಿದ ಅಮಲಿನಲ್ಲಿ ಮೆರವಣಿಗೆಯಲ್ಲಿನ ನೃತ್ಯವನ್ನು ನಿಲ್ಲಿಸುವಂತೆ ಹೇಳಿದರು. ಇದರ ಪರಿಣಾಮವಾಗಿ ಎರಡು ಗುಂಪುಗಳ ನಡುವೆ ಕಾಳಗ ಉಂಟಾಯಿತು.

ಈ ಘರ್ಷಣೆಯಲ್ಲಿ ಮೃತಪಟ್ಟವರನ್ನು ರಾಕೇಶ್‌ 22 ಮತ್ತು ದೇವಂತಿ 50 ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಜಗಳ ಮಾಡಿಕೊಂಡ ಎರಡೂ ಬಣಗಳು ಎಫ್ಐಆರ್‌ ದಾಖಲಿಸಿವೆ. ಪ್ರಕರಣವು ತನಿಖೆಯಲ್ಲಿದೆ ಎಂದು ಸರ್ಕಲ್‌ ಆಫೀಸರ್‌ ರವೀಂದ್ರ ಕುಮಾರ್‌ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next