Advertisement

ಉ.ಪ್ರ.ವಿದ್ಯಾರ್ಥಿಗಳಿಗೆ ಯೋಗಿ haircut, ಗಡ್ಡ, ಲವ್‌ ಜಿಹಾದ್‌ ಸಲ್ಲ

11:32 AM Apr 28, 2017 | udayavani editorial |

ಲಕ್ನೋ : ಶಾಲಾ ಮಕ್ಕಳು ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ರೀತಿಯ ಹೇರ್‌ ಕಟ್‌ ಮಾಡಿಸಿಕೊಂಡು ಬರಬೇಕು ಎಂದು ಉತ್ತರ ಪ್ರದೇಶದಲ್ಲಿ ನ ಶಾಲೆ ಕಾಲೇಜುಗಳು ತಮ್ಮಲ್ಲಿನ ವಿದ್ಯಾರ್ಥಿಗಳಿಗೆ ತಾಕೀತು ಮಾಡುತ್ತಿವೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಮಾತ್ರವಲ್ಲದೆ ಗಡ್ಡ ಬಿಡಕೂಡದು ಮತ್ತು ಲವ್‌ ಜಿಹಾದ್‌ಗೆ ಬಲಿಯಾಗಬಾರದು ಎಂದು ವಿದ್ಯಾರ್ಥಿಗಳಿಗೆ ಖಡಕ್‌ ಆಗಿ ತಿಳಿಸಲಾಗಿದೆ ಎಂದು ಗೊತ್ತಾಗಿದೆ. 

Advertisement

ಮೀರತ್‌ನ ಸಿಬಿಎಸ್‌ಇ ಸಂಯೋಜಿತ ಋಷಭ್‌ ಅಕಾಡೆಮಿ ಕೋ ಎಜುಕೇಶನಲ್‌ ಇಂಗ್ಲಿಷ್‌ ಮೀಡಿಯಂ ಶಾಲೆಯ ಕೆಲವು ವಿದ್ಯಾರ್ಥಿಗಳಿಗೆ ನಿನ್ನೆ ಗುರುವಾರ ಸರಿಯಾದ ರೀತಿಯಲ್ಲಿ (ಮುಖ್ಯಮಂತ್ರಿ ಯೋಗಿ ರೀತಿಯಲ್ಲಿ) ಹೇರ್‌ ಕಟ್‌ ಮಾಡಿಕೊಂಡು ಬರವಂತೆ ಸೂಚಿಸಲಾಗಿದೆ ಎನ್ನಲಾಗಿದೆ.

“ಸರಿಯಾಗಿ ಹೇರ್‌ ಕಟ್‌ ಮಾಡಿಕೊಳ್ಳದ ಕಾರಣಕ್ಕೆ ನಮಗೆ ಕ್ಯಾಂಪಸ್‌ ಪ್ರವೇಶ ನಿರಾಕರಿಸಲಾಯಿತು’ ಎಂದು ಋಷಬ್‌ ವಿದ್ಯಾಲಯದ ಕೆಲವು ವಿದ್ಯಾರ್ಥಿಗಳು ಆರೋಪಿಸಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. 

ಋಷಭ್‌ ಶಾಲೆಯ ವಿದ್ಯಾರ್ಥಿಗಳಿಗೆ ಯೋಗಿ ಆದಿತ್ಯನಾಥ್‌ ರೀತಿಯ ಹೇರ್‌ ಕಟ್‌ ಮಾಡಿಕೊಂಡಿ ಶಾಲೆಗೆ ಬರುವಂತೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next