Advertisement

ಉ.ಪ್ರ. ಯೋಗಿ ಸರಕಾರದ ನಿರ್ಲಕ್ಷ್ಯ: ಸಚಿವ ಪದ ತ್ಯಜಿಸಿದ ರಾಜಭಾರ್‌

10:19 AM Feb 14, 2019 | Team Udayavani |

ಲಕ್ನೋ : ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸಚಿವ ಸಂಪುಟದಲ್ಲಿ  ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾಗಿರುವ ಮತ್ತು ಸುಹೇಲ್‌ದೇವ್‌ ಭಾರತೀಯ ಸಮಾಜ ಪಕ್ಷದ ನಾಯಕರಾಗಿರುವ ಓಂ ಪ್ರಕಾಶ್‌ ರಾಜಭಾರ್‌ ಅವರು ‘ನನ್ನನ್ನು ಸರಕಾರ ಅಲಕ್ಷಿಸುತ್ತಿದೆ’ ಎಂಬ ಕಾರಣಕ್ಕೆ ಅಸಮಾಧಾನ ತೋರ್ಪಡಿಸಿ ಸಚಿವ ಪದವನ್ನು ಬಿಟ್ಟುಕೊಟ್ಟಿದ್ದಾರೆ. 

Advertisement

‘ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಸರಿಯಾಗಿ ವಿದ್ಯಾರ್ಥಿ ವೇತನ ವಿತರಿಸುವಲ್ಲಿ ರಾಜ್ಯ ಸರಕಾರ ವಿಫ‌ಲವಾಗಿದೆ ಮತ್ತು ಸಾಮಾಜಿಕ ನ್ಯಾಯ ಸಮಿತಿಯು ಹಿಂದುಳಿದ ತಮ್ಮ ಸಮುದಾಯಕ್ಕೆ ಕೊಟ್ಟಿರುವ ಶೇ.27ರ ಮೀಸಲಾತಿಯ ಶಿಫಾರಸನ್ನು ರಾಜ್ಯ ಸರಕಾರ ಅನುಷ್ಠಾನಿಸಿಲ್ಲ’ ಎಂಬ ಕಾರಣ ನೀಡಿ ರಾಜಭಾರ್‌ ತಮ್ಮ ಹುದ್ದೆಯನ್ನು ತ್ಯಜಿಸಿದ್ದಾರೆ. 

ರಾಜಭಾರ್‌ ಅವರು ಪೂರ್ವ ಉತ್ತರ ಪ್ರದೇಶದ ಗಾಜೀಪುರದ ಜಹೂರಾಬಾದ್‌ ಕ್ಷೇತ್ರದ ಶಾಸಕರು. ಇವರ ಸುಹೇಲ್‌ದೇವ್‌ ಭಾರತೀಯ ಸಮಾಜ ಪಕ್ಷ (ಎಸ್‌ಬಿಎಸ್‌ಪಿ) ರಾಜ್ಯದಲ್ಲಿನ ಬಿಜೆಪಿ ಸರಕಾರದ ಮಿತ್ರ ಪಕ್ಷವಾಗಿದೆ. ರಾಜಭಾರ್‌ ಅವರು ಜನರ ಸಶಕ್ತೀಕರಣ ಮತ್ತು ವಿಕಲಾಂಗರ ಅಭ್ಯುದಯ ಇಲಾಖೆಯ ಹೊಣೆಗಾರಿಕೆಯನ್ನು ತಮ್ಮಲ್ಲೇ ಉಳಿಸಿಕೊಂಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next