Advertisement

ಭೀಕರ ಅಪಘಾತ: ಸಿಎಂ ಯೋಗಿ ದೇವಸ್ಥಾನದ ಕಚೇರಿಯ ವಿಶೇಷ ಅಧಿಕಾರಿ ಸಾವು

03:20 PM Aug 26, 2022 | Team Udayavani |

ಗೋರಖ್‌ಪುರ: ಭೀಕರ ರಸ್ತೆ ಅಪಘಾತದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಗೋರಖ್‌ನಾಥ್ ದೇವಸ್ಥಾನದ ಕ್ಯಾಂಪ್ ಕಚೇರಿಯ ವಿಶೇಷ ಕರ್ತವ್ಯಾಧಿಕಾರಿ ಮೋತಿಲಾಲ್ ಸಿಂಗ್ ಸಾವನ್ನಪ್ಪಿದ್ದಾರೆ ಮತ್ತು ಅವರ ಪತ್ನಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

Advertisement

ಮೋತಿಲಾಲ್ (64) ಮತ್ತು ಅವರ ಪತ್ನಿ ವೀಣಾ ಅವರು ಗುರುವಾರ ರಾತ್ರಿ ಎಸ್‌ಯುವಿಯಲ್ಲಿ ಲಕ್ನೋದಿಂದ ಗೋರಖ್‌ಪುರಕ್ಕೆ ಹಿಂತಿರುಗುತ್ತಿದ್ದರು ಮತ್ತು ‘ನೀಲಗಾಯ್’ ಪ್ರಾಣಿಯು ವಾಹನದ ಮುಂದೆ ಹಾರಿದಾಗ ಚಾಲಕ ವಾಹನದ ನಿಯಂತ್ರಣವನ್ನು ಕಳೆದುಕೊಂಡು ಕಂದಕಕ್ಕೆ ಬಿದ್ದಿದೆ.

ಅವರನ್ನು ಗೋರಖ್‌ಪುರದ ಗುರು ಗೋರಕ್ಷನಾಥ್ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಲ್ಲಿ ಶುಕ್ರವಾರ ಮುಂಜಾನೆ ಮೋತಿಲಾಲ್ ನಿಧನ ಹೊಂದಿದರು. ವೀಣಾ ಮತ್ತು ಚಾಲಕ ಬಿಆರ್‌ಡಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೋತಿಲಾಲ್ ಅವರು ಜನರ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸುತ್ತಿದ್ದರು ಮತ್ತು ಅವುಗಳನ್ನು ಪರಿಹರಿಸಲು ಕೆಲಸ ಮಾಡುತ್ತಿದ್ದರು ಎಂದು ಮಂದಿರದಲ್ಲಿ ಹಲವಾರು ತೀವ್ರ ಸಂತಾಪ ಸೂಚಿಸಿದ್ದಾರೆ.

ಸಿಂಗ್ ಅವರ ನಿಧನಕ್ಕೆ ಯೋಗಿ ಆದಿತ್ಯನಾಥ್ ಅವರು ಟ್ವಿಟರ್‌ನಲ್ಲಿ ತೀವ್ರ ಸಂತಾಪ ಸೂಚಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next