Advertisement

ಬಿಲಾವಲ್ ಭುಟ್ಟೋ ತಲೆ ತೆಗೆದವರಿಗೆ 2 ಕೋಟಿ ರೂ. ಇನಾಮು ಘೋಷಿಸಿದ ಬಿಜೆಪಿ ಮುಖಂಡ

09:56 PM Dec 17, 2022 | Team Udayavani |

ಬಾಗ್‌ಪತ್: ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಪಾಕ್ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಅವರ ತಲೆ ತೆಗೆದವರಿಗೆ 2 ಕೋಟಿ ರೂಪಾಯಿ ಇನಾಮು ನೀಡುವುದಾಗಿ ಉತ್ತರ ಪ್ರದೇಶದ ಸ್ಥಳೀಯ ಬಿಜೆಪಿ ನಾಯಕರೊಬ್ಬರು ಶನಿವಾರ ಹೇಳಿದ್ದಾರೆ.

Advertisement

ಭುಟ್ಟೋ ಜರ್ದಾರಿ ಹೇಳಿಕೆಯನ್ನು ವಿರೋಧಿಸಿ ಬಿಜೆಪಿ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸುತ್ತಿದ್ದು, ಕಲೆಕ್ಟರೇಟ್‌ನಲ್ಲಿ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಬಾಗ್‌ಪತ್‌ನ ಜಿಲ್ಲಾ ಪಂಚಾಯತ್ ಸದಸ್ಯ ಮನುಪಾಲ್ ಬನ್ಸಾಲ್ ಈ ಘೋಷಣೆ ಮಾಡಿದ್ದಾರೆ.

“ಸಚಿವ ಬಿಲಾವಲ್ ಭುಟ್ಟೋ ಶಿರಚ್ಛೇದ ಮಾಡುವ ಯಾರಿಗಾದರೂ ನಾನು 2 ಕೋಟಿ ರೂಪಾಯಿ ಬಹುಮಾನ ನೀಡುತ್ತೇನೆ ಎಂದು ಘೋಷಿಸುತ್ತೇನೆ” ಎಂದು ಬನ್ಸಾಲ್ ಹೇಳಿದ್ದಾರೆ.ಅವರ ಘೋಷಣೆಯ ನಂತರ ಜನಸಮೂಹದಿಂದ ‘ಮನುಪಾಲ್ ಬನ್ಸಾಲ್ ಜಿಂದಾಬಾದ್’ ಘೋಷಣೆಗಳು ಮೊಳಗಿದವು.

ನಂತರ ಪಿಟಿಐ ಜೊತೆ ಮಾತನಾಡಿದ ಬನ್ಸಾಲ್ ,ನಾನು ನನ್ನ ಹೇಳಿಕೆಗೆ ಬದ್ಧವಾಗಿದ್ದೇನೆ. ನಾನು ಇಂದು ಆ ಹೇಳಿಕೆಯನ್ನು ನೀಡಿದ್ದೇನೆ. ನಾವು ತುಂಬಾ ಗೌರವಿಸುವ ನಮ್ಮ ಪ್ರಧಾನಿಯ ಬಗ್ಗೆ ಅವರು ಇಂತಹ ಮಾತುಗಳನ್ನು ಹೇಳುತ್ತಿದ್ದರೆ, ಅಂತಹ ವ್ಯಕ್ತಿಯನ್ನು ನಾವು ಸಹಿಸುವುದಿಲ್ಲ. ನಾವು ನಮ್ಮ ಪ್ರಧಾನ ಮಂತ್ರಿಯೊಂದಿಗೆ ಅಪಾರವಾದ ಬಾಂಧವ್ಯವನ್ನು ಹೊಂದಿದ್ದೇವೆ ಮತ್ತು ನಾವು ಅವರಿಗಾಗಿ ಏನು ಬೇಕಾದರೂ ಮಾಡಲು ನಮಗೆ ಯಾವುದೇ ಸಮಸ್ಯೆ ಇಲ್ಲ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next