Advertisement

ಅವೈಜ್ಞಾನಿಕವಾಗಿ ಸಾಗುತ್ತಿರುವ ಹೆದ್ದಾರಿ ಕಾಮಗಾರಿ: ಸುಮಲತಾ

04:28 PM Aug 19, 2021 | Team Udayavani |

ಮದ್ದೂರು: ಜಿಲ್ಲೆಯ ರೈತರ ಮತ್ತು ಸಾರ್ವಜನಿಕರ ದೂರಿನ ಮೇರೆಗೆ ಮೇಲ್ಸೇತುವೆ ಅವ್ಯವಸ್ಥೆ ಕಾಮಗಾರಿ ಕುರಿತಾಗಿ ಕೇಂದ್ರ ಸಚಿವರೊಟ್ಟಿಗೆ
ಚರ್ಚಿಸಿರುವುದಾಗಿ ಸಂಸದೆ ಸುಮಲತಾ ಅಂಬರೀಶ್‌ ತಿಳಿಸಿದರು.

Advertisement

ಶಿಂಷಾ ನದಿಗೆ ನಿರ್ಮಿಸಿರುವ ಮೇಲ್ಸೇತುವೆ ಬದಿ ಸರ್ವಿಸ್‌ ರಸ್ತೆ ನಿರ್ಮಾಣ ಕೈಬಿಟ್ಟಿರುವ ಕುರಿತಾಗಿ ತಾಲೂಕಿನ ಕೆ.ಕೋಡಿಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ನಡೆಸುತ್ತಿರುವ ಪ್ರತಿಭಟನೆ ಸಂಬಂಧ ಸ್ಥಳಕ್ಕೆ ಭೇಟಿ ನೀಡಿದ ಅವರು, ಸ್ಥಳೀಯರಿಂದ ಅಹವಾಲು ಸ್ವೀಕರಿಸಿದರು.
ಬಳಿಕ ಮಾತನಾಡಿ, ಬೆಂಗಳೂರು-ಮೈಸೂರು ಹೆದ್ದಾರಿ ಕಾಮಗಾರಿಯು ವೈಜ್ಞಾನಿಕ ರೀತಿಯಲ್ಲಿ ಸಾಗುತ್ತಿಲ್ಲ. ಕೆಲವೆಡೆ ಸರ್ವಿಸ್‌ ರಸ್ತೆಗಳೂ ಸೇರಿದಂತೆ ಗ್ರಾಮಗಳನ್ನು ಸಂಪರ್ಕಿಸುವ ಒಳ ಪ್ರವೇಶ ಮತ್ತು ಹೊರ ಹೋಗುವ ಅಂಡರ್‌ ಪಾಸ್‌ಗಳ ಸಂಪರ್ಕ ವ್ಯವಸ್ಥೆಯನ್ನು
ಕೈಬಿಟ್ಟಿರುವುದಾಗಿ ದೂರಿದರು.

ಇದನ್ನೂ ಓದಿ:ಜನಾರ್ಧನ ರೆಡ್ಡಿಗೆ ಬಳ್ಳಾರಿಗೆ ತೆರಳಲು ಷರತ್ತುಬದ್ಧ ಅನುಮತಿ ನೀಡಿದ ಸುಪ್ರೀಂ ಕೋರ್ಟ್

ಕೇಂದ್ರ ಭೂ ಸಾರಿಗೆ ಸಚಿವ ನಿತೀನ್‌ ಗಡ್ಕರಿ ಹಾಗೂ ಉನ್ನತ ಅಧಿಕಾರಿಗಳನ್ನು ಭೇಟಿಯಾಗಿ ಅವ್ಯವಸ್ಥೆಗಳ ಕುರಿತಾಗಿ ಚರ್ಚಿಸಿದ್ದು, ಸರಿಪಡಿಸುವ ಸಂಬಂಧ ಭರವಸೆ ನೀಡುತ್ತಿರುವ ಕುರಿತು ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಹೆದ್ದಾರಿ ಕಾಮಗಾರಿ ಅವ್ಯವಸ್ಥೆ ಸಂಬಂಧ ಹಾಗೂ ಎತ್ತಿದಾಗಲೆಲ್ಲ ಕೆಲವರು ಅದನ್ನು ಬೇರೆ ರೀತಿಯೇ ಬಿಂಬಿಸುತ್ತಿದ್ದು, ಹೆದ್ದಾರಿ ಕಾಮಗಾರಿಗೆ ತಡೆ ಮಾಡುತ್ತಿದ್ದಾರೆಂಬ ಅರ್ಥ ಬರುವ ರೀತಿ ಬಿಂಬಿಸುತ್ತಿರುವುದಾಗಿ ಯಾರ ಹೆಸರೇಳದೆ ಆರೋಪಿಸಿದರು.

Advertisement

ಸರ್ವಿಸ್‌ ರಸ್ತೆ ಕೈಬಿಟ್ಟಲ್ಲಿ ಆತ್ಮಹತ್ಯೆ: ಕೆ.ಕೋಡಿಹಳ್ಳಿ, ಅಗರಲಿಂಗನದೊಡ್ಡಿ, ಹುಣಸೇಮರದದೊಡ್ಡಿ, ತೈಲೂರು, ಮಾದನಾಯಕನಹಳ್ಳಿ ಒಳಗೊಂಡಂತೆ ಎಂಟತ್ತು ಹಳ್ಳಿಗಳ ಸಾರ್ವಜನಿಕರು ಶಿಂಷಾ ನದಿಗೆ ಸರ್ವಿಸ್‌ ರಸ್ತೆ ನಿರ್ಮಿಸಿದ ಹೊರತಾಗಿ 6 ಕಿ.ಮೀ. ಹೆಚ್ಚು ದೂರವನ್ನು ಸೋಮನಹಳ್ಳಿ ಮಾರ್ಗವಾಗಿ ಕ್ರಮಿಸಬೇಕಾದ ಆತಂಕ ತೋಡಿಕೊಂಡ ರೈತರ ಗುಂಪಿನಲ್ಲಿದ್ದ ನೀಲೇಗೌಡ, ಸರ್ವಿಸ್‌ ರಸ್ತೆ ಕೈಬಿಟ್ಟಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಂಸದೆ ಸುಮಲತಾ, ಸಂಬಂಧಿಸಿದ ಅಧಿಕಾರಿಗಳನ್ನು ಸ್ಥಳಕ್ಕೆಕರೆಯಿಸಿ ಶಿಂಷಾನದಿಗೆ ಸರ್ವಿಸ್‌ ರಸ್ತೆ ನಿರ್ಮಾಣ ಸಂಬಂಧ ಕ್ರಮವಹಿಸುವ ಭರವಸೆ ನೀಡಿದರು. ಮನ್‌ಮುಲ್‌ ಮಾಜಿ ಅಧ್ಯಕ್ಷ ಕದಲೂರು ರಾಮಕೃಷ್ಣ, ಪುರಸಭೆ ಮಾಜಿ ಅಧ್ಯಕ್ಷ ಎಂ.ಪಿ. ಅಮರ್‌ಬಾಬು, ಗ್ರಾಪಂ ಸದಸ್ಯರಾದ ಸುಜಾತ, ಸರಸ್ವತಿ, ಮುಖಂಡರಾದ ಧರಣಿ, ಮಹದೇವಯ್ಯ, ಅಪ್ಪೇಗೌಡ , ಮರೀಗೌಡ, ಶಂಕರ್‌, ಶಿವರಾಜು, ಸುರೇಂದ್ರ, ಶಿವಣ್ಣ, ಪ್ರದೀಪ್‌, ವೆಂಕಟೇಶ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next