Advertisement

ಸಾರ್ವತ್ರಿಕ ನೀತಿ ಜಾರಿ ಅಸಾಧ್ಯ: ಸುಪ್ರೀಂ

12:56 AM Sep 22, 2020 | mahesh |

ಹೊಸದಿಲ್ಲಿ: ಪ್ರತಿಭಟಿಸುವ ಹಕ್ಕಿನ ವಿರುದ್ಧ ಸಾರ್ವತ್ರಿಕ ನೀತಿ ರೂಪಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಅಭಿಪ್ರಾಯಪಟ್ಟಿದೆ.

Advertisement

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಡಿಸೆಂಬರ್‌ನಲ್ಲಿ ದೆಹಲಿಯ ಶಾಹೀನ್‌ಬಾಗ್‌ನಲ್ಲಿ ನಡೆದ ರಸ್ತೆತಡೆ ಪ್ರಕರಣ ಕುರಿತಾದ ವಿಚಾರಣೆ ವೇಳೆ ಸುಪ್ರೀಂ ಈ ಅಭಿಮತ ವ್ಯಕ್ತಪಡಿಸಿದೆ. “ನಾವು ಪ್ರತಿ ಭಟಿಸುವ ಹಕ್ಕನ್ನು ಮತ್ತು ರಸ್ತೆ ತಡೆಗಳನ್ನು ಸಮತೋಲನಗೊಳಿಸ ಬೇಕಿದೆ. ಇಂಥ ವಿವಾದಗಳನ್ನು ಸಮರ್ಥ ವಾಗಿ ಎದುರಿ ಸಬೇಕಾಗಿದೆ. ಪ್ರಕರಣದಿಂದ ಪ್ರಕರಣಕ್ಕೆ ಪ್ರತಿಭಟನೆಯ ಸ್ವರೂಪಗಳು ಬದಲಾ ಗುತ್ತಿರುತ್ತವೆ. ಇವುಗಳ ವಿರುದ್ಧ ಸಾರ್ವತ್ರಿಕ ನೀತಿ ರೂಪಿಸಲು ಸಾಧ್ಯವಿಲ್ಲ’ ಎಂದು ನ್ಯಾಯಪೀಠ ಹೇಳಿದೆ.

“ಸಿಎಎ ವಿರೋಧಿ ರಸ್ತೆತಡೆಗಳು 100 ದಿನಗಳಿಗೂ ಹೆಚ್ಚು ಕಾಲ ನಡೆದು ಸಾರ್ವಜನಿಕರು ತೊಂದರೆ ಅನುಭವಿ ಸುವಂತಾಗಿತ್ತು. ಸಾರ್ವಜನಿಕ ಹಿತಾಸಕ್ತಿಗೆ ದಕ್ಕೆ ತಂದೊಡ್ಡುವ ಇಂಥ ಬೃಹತ್‌ ಪ್ರತಿಭಟನೆಗಳಿಗೆ ಅವಕಾಶ ನೀಡಬಾರದು’ ಎಂದು ವಕೀಲ ಅಮಿತ್‌ ಸಾಹಿ° ವಾದಿಸಿದ್ದ ಹಿನ್ನೆಲೆಯಲ್ಲಿ, ಸುಪ್ರೀಂ ಹೀಗೆ ಹೇಳಿದೆ.

“ಸಂಸತ್ತಿನಲ್ಲಿ ಪ್ರಜಾಪ್ರಭುತ್ವ ಮಾದ ರಿಯ ಹೋರಾಟಗಳು ನಡೆಯುತ್ತವೆ. ಆದರೆ, ರಸ್ತೆಗಳಲ್ಲಿ ನಡೆಸುವ ಹೋರಾಟ ಗಳು ಶಾಂತಿಯುತದಿಂದ ಕೂಡಿರಬೇಕು’ ಎಂದೂ ನ್ಯಾಯಮೂರ್ತಿಗಳಾದ ಎಸ್‌.ಕೆ. ಕೌಲ್‌, ಅನಿರುದ್ಧ ಬೋಸ್‌ ಮತ್ತು ಕೃಷ್ಣಾ ಮುರಾರಿ ಅವರನ್ನೊಳಗೊಂಡ ಪೀಠ ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next