Advertisement

ನೂರಾರು ಶರತ್‌ ಹುಟ್ಟಿ ಬರ್ತಾರೆ:ತಂದೆ ತಾಯಿಗೆ ಸಾಂತ್ವನ ಹೇಳಿ ಡಿವಿಎಸ್

03:45 PM Jul 11, 2017 | Team Udayavani |

ಬಂಟ್ವಾಳ : ದುಷ್ಕರ್ಮಿಗಳಿಂದ ಹತ್ಯೆಗೀಡಾದ ಆರ್‌ಎಸ್‌ಎಸ್‌ ಕಾರ್ಯಕರ್ತ ಶರತ್‌ ನಿವಾಸಕ್ಕೆ ಕೇಂದ್ರ ಸಚಿವ ಡಿ.ವಿ .ಸದಾನಂದ ಗೌಡ ಅವರು ಮಂಗಳವಾರ ಭೇಟಿ ನೀಡಿ ಸಾಂತ್ವನ ಹೇಳಿದರು. 

Advertisement

ಡಿವಿಎಸ್‌ ಎದುರು ನೋವು ತೋಡಿಕೊಂಡ ತಂದೆ ,ತಾಯಿ ಗೋಳಿಟ್ಟರು. ಡಿವಿಎಸ್‌ ಅವರೊಂದಿಗೆ ಕಾರ್ಕಳ ಶಾಸಕ ಸುನಿಲ್‌ ಕುಮಾರ್‌ , ಪರಿಷತ್‌ ಸದಸ್ಯ ಕ್ಯಾ ಗಣೇಶ್‌ ಕಾರ್ಣಿಕ್‌ ಸೇರಿದಂತೆ ಬಿಜೆಪಿ ನಾಯಕರು ಉಪಸ್ಥಿತರಿದ್ದರು. 

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿವಿಎಸ್‌ ಶರತ್‌ ಓರ್ವ ಯಾವುದೇ ಕಪ್ಪು ಚುಕ್ಕೆ ಇಲ್ಲದ ಆರ್‌ಎಸ್‌ಎಸ್‌ ಕಾರ್ಯಕರ್ತ. ಅಮಾಯಕನ ಹತ್ಯೆ ನಡೆದಿದೆ. ಇಂತಹ ನೂರು ಶರತ್‌ ಹುಟ್ಟಿ ಬರುತ್ತಾರೆ. ಹತ್ಯೆಗೈದವರ ಹಿಂದೆ ಆಡಳಿತ ಸೂತ್ರ ಹಿಡಿದವರೇ ಇದ್ದಾರೆ ಎಂದರು.

ಗಲಭೆಗೆ ಸದಾನಂದ ಗೌಡ ತುಪ್ಪ ಸುರಿಯುತ್ತಿದ್ದಾರೆ ಎಂದ ಸಚಿವ ರಮನಾಥ್‌ ರೈ ವಿರುದ್ಧ ಕಿಡಿಕಾರಿದರು. 

Advertisement

Udayavani is now on Telegram. Click here to join our channel and stay updated with the latest news.

Next