Advertisement

ಬುದ್ದಿಜೀವಿಗಳ ವಿರುದ್ಧ ಮತ್ತೆ ಕಿಡಿ ಕಾರಿದ ಅನಂತ್‌ ಹೆಗಡೆ!

12:36 PM Jan 17, 2018 | |

 ಬೆಳಗಾವಿ: ಕೇಂದ್ರ ಸಚಿವ ಅನಂತ್‌ ಕುಮಾರ್‌ ಹೆಗಡೆ ಮತ್ತೆ ಬುದ್ದಿಜೀವಿಗಳ ವಿರುದ್ಧ ಕಿಡಿ ಕಾರಿ ಸುದ್ದಿಯಾಗಿದ್ದಾರೆ. 

Advertisement

ಬೆಳಗಾವಿಯಲ್ಲಿ ಬುಧವಾರ ನಡೆದ ಸ್ಕಿಲ್‌ ಇಂಡಿಯಾ ಕಾರ್ಯಕ್ರಮದಲ್ಲಿ ಭಾಷಣದ ವೇಳೆ ಕೆಂಡಾಮಂಡಲವಾದ ಸಚಿವ ಹೆಗಡೆ ‘ಸೋ ಕಾಲ್ಡ್‌ ಬುದ್ದಿಜೀವಿಗಳು ಹೇಳ್ತಾರೆ.. ಇಲ್ಲ,ಇಲ್ಲ ನೀವು ಮಾನವರಾಗಬೇಕು ಎಂದು.ಎಂಥ, ನಾನೇನು ದನವ, ಪ್ರಾಣಿಗಳ ತರ ಕಾಣ್ತೀನಾ? ಗೊತ್ತಿಲ್ಲ ಅವರಿಗೆ ದೃಷ್ಟಿ ದೋಷ ಆಗಿರಬೇಕು’ಎಂದು ಕಿಡಿ ಕಾರಿದರು. 

‘ಮಾನವರಾಗಬೇಕು ಅನ್ನುತ್ತಾರಲ್ಲ ನಾವು  ಹುಟ್ಟಿದ್ದೇ ಮಾನವರಾಗಿ , ಬದುಕುವುದು ಮಾನವರಾಗಿ . ನರ ನಾರಾಯಣ ಆಗಬೇಕು . ನೀವು ಯಾಕೆ ಹೇಳಿಕೊಡುವುದು’ ಎಂದು ಕಿಡಿ ಕಾರಿದರು. 

‘ಬುದ್ದಿಜೀವಿ ಸಾಹಿತಿಗಳು ಇವತ್ತು ಬರೀತಾರೆ.ಅವರು ಬರೆದಿದ್ದೆಲ್ಲಾ ಸಾಹಿತ್ಯ,ಗೀಚಿದ್ದೆಲ್ಲಾ ಕಾವ್ಯ. ಅರ್ಥವೂ ಇಲ್ಲ,ತುದಿಯೂ ಇಲ್ಲ, ಬುಡವೂ ಇಲ್ಲ. ಗವರ್ನಮೆಂಟ್‌ ಸೈಟ್‌ಗಾಗಿ  ಪಟ್ಟ ಕಟ್ಟಿಕೊಳ್ಳುತ್ತಾರೆ’ ಎಂದರು. 

‘ಒಬ್ಬ ಕವಿ ಹೇಳುತ್ತಾನೆ ”ಎನ್ನೆದೆಯ ಬಿಸಿ ರಕ್ತಬಸಿ ಬಸಿದು  ಮಸಿ ಮಾಡಿ ನಾ ಬರಿಯಬಲ್ಲೇ”. ಬದುಕು ಕೂಡ ಇದನ್ನೇ ಅಪೇಕ್ಷೆ ಪಡುತ್ತದೆ. ನಿಮ್ಮದೆ ಬೆವರು ನಿಮ್ಮದೆ ರಕ್ತ. ನಮ್ಮ ಜೀವನದಲ್ಲಿ ಹೊಸ ಆದರ್ಶ ಸ್ಥಾಪನೆ ಮಾಡಬೇಕು’ ಎಂದರು. 
 

Advertisement
Advertisement

Udayavani is now on Telegram. Click here to join our channel and stay updated with the latest news.

Next