Advertisement

ಕೇಂದ್ರ ಬಜೆಟ್ 2020; ಕೃಷಿ ಕ್ಷೇತ್ರಕ್ಕೆ ಬಂಪರ್, ರೈತರಿಗೆ ಈ ಬಾರಿ ಭರ್ಜರಿ ಕೊಡುಗೆ

10:13 AM Feb 02, 2020 | Nagendra Trasi |

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಲೋಕಸಭೆಯಲ್ಲಿ 2020-21ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿದ್ದು, ದೇಶದ ರೈತರ ಅಭಿವೃದ್ಧಿಗಾಗಿ 16 ಅಂಶಗಳನ್ನು ಘೋಷಿಸಿದ್ದಾರೆ.

Advertisement

ಕೃಷಿ ಮತ್ತು ನೀರಾವರಿಗೆ 2.83 ಲಕ್ಷ ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗಿದೆ. ನರೇಗಾ ಯೋಜನೆಯಡಿ ಜೇನು ಕೃಷಿಗೆ ಉತ್ತೇಜನ. ಕೃಷಿ ಉತ್ಪನ್ನಗಳಿಗಾಗಿ ಇ ಮಾರುಕಟ್ಟೆ ಸ್ಥಾಪನೆ. ಜಾನುವಾರುಗಳ ಕಾಲು ಬಾಯಿ ರೋಗ ತಡೆಗೆ ಕ್ರಮ ಕೈಗೊಳ್ಳುವುದಾಗಿ ಬಜೆಟ್ ನಲ್ಲಿ ತಿಳಿಸಿದ್ದಾರೆ.

ನೈಸರ್ಗಿಕ ಕೃಷಿಗಾಗಿ ರಾಷ್ಟ್ರೀಯ ಮಾರುಕಟ್ಟೆ, ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಗೆ ಪ್ರಸ್ತಾವನೆ. ರೈತರ ಅನುಕೂಲಕ್ಕಾಗಿ ಕೃಷಿ ರೈಲ್, ಕೃಷಿ ಉಡಾನ್ ಯೋಜನೆ, ಮುದ್ರಾ, ನಬಾರ್ಡ್ ಯೋಜನೆಯಡಿ ರೈತರಿಗೆ ಸಾಲ, ಸೌಲಭ್ಯ ನೀಡಲಾಗುವುದು.

ರೈತ ಮಹಿಳೆಯರಿಗಾಗಿ ನೂತನ ಧಾನ್ಯ ಲಕ್ಷ್ಮೀ ಯೋಜನೆ ಜಾರಿ. ಪ್ರಧಾನ ಮಂತ್ರಿ ಫಸಲ್ ಭೀಮ್ ಯೋಜನೆ. ಪಿಎಂ ಫಸಲ್ ಭೀಮ್ ಯೋನೆಯಿಂದ 6.11 ಕೋಟಿ ರೈತರಿಗೆ ಅನುಕೂಲವಾಗಲಿದೆ. ಅಲ್ಲದೇ ರೈತರ ಕೃಷಿ ಪಂಪ್ ಸೆಟ್ ಗೆ ಸೌರ ವಿದ್ಯುತ್ ಜೋಡಣೆ ಮಾಡಲಾಗುವುದು ಎಂದು ಘೋಷಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next