Advertisement

ಪೊಲೀಸರ ಕಾರ್ಯವೈಖರಿ ಬಗ್ಗೆ ರೇಣು ಅಸಮಾಧಾನ

08:04 PM Nov 05, 2022 | teamudaya |

ಹೊನ್ನಾಳಿ: ಸಹೋದರ ಪುತ್ರನ ನಿಗೂಢ ಸಾವಿನ ತನಿಖೆ ನಡೆಸುತ್ತಿರುವ ಪೊಲೀಸರ ಕಾರ್ಯವೈಖರಿ ರೀತಿ ಬಗ್ಗೆ ಶಾಸಕ ರೇಣುಕಾಚಾರ್ಯ ಬೇಸರ ವ್ಯಕ್ತಪಡಿಸಿದ್ದಾರೆ.

Advertisement

ನನ್ನ ಪುತ್ರನ ಕೊಲೆ ಪೂರ್ವನಿಯೋಜಿತ ಎಂದು ನಾನು ಹೇಳಿದ್ದೇನೆ. ಮಾಧ್ಯಮಗಳು ಶಂಕೆ ವ್ಯಕ್ತಪಡಿಸಿವೆ. ಇಂತಹ ಸಂದರ್ಭದಲ್ಲಿ ಪೊಲೀಸ್‌ ಇಲಾಖೆಯ ಉನ್ನತ ಅಧಿಕಾರಿಗಳು ಇದನ್ನು ಅಪಘಾತ ಎಂದು ಬಿಂಬಿಸಲು ಹೊರಟಿರುವುದು ನಿಜಕ್ಕೂ ಬೇಸರ ತರಿಸಿದೆ. ನಾನು ಶೀಘ್ರ ಸಿಎಂ ಹಾಗೂ ಗೃಹ ಸಚಿವರಿಗೆ ಕರೆ ಮಾಡಿ ಮಾತನಾಡುತ್ತೇನೆ. ನಮಗೆ ನ್ಯಾಯ ಸಿಗಬೇಕು ಎಂದರು.

ಚಂದ್ರಶೇಖರ್‌ ಅಂತ್ಯಕ್ರಿಯೆ ನಡೆದ ನಂತರ ಶಾಸಕರ ಮನೆಯಲ್ಲಿ ನೀರವ ಮೌನ ಆವರಿಸಿದ್ದು, ರೇಣುಕಾಚಾರ್ಯ ಮನೆಯಲ್ಲೇ ಚಿಂತೆಗೆ ಜಾರಿದ್ದಾರೆ. ಅವಳಿ ತಾಲೂಕಿನಾದ್ಯಂತ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಶನಿವಾರವೂ ಬಂದು ಶಾಸಕರಿಗೆ ಸಮಾಧಾನ ಹೇಳುವ ಪ್ರಯತ್ನ ಮಾಡುತ್ತಿದ್ದರೂ ಶಾಸಕರು “ನನ್ನ ಮಗ ನನ್ನಿಂದ ಬಲಿಯಾಗಿಬಿಟ್ಟ’ ಎಂದು ರೋದಿಸುತ್ತಿದ್ದಾರೆ.

ತಾಲೂಕಿನ ಮಾದೇನಹಳ್ಳಿ ಗ್ರಾಮದ ಕೆಲ ಮಹಿಳೆಯರು ತಮ್ಮ ಮನೆಯಿಂದ ಊಟೋಪಹಾರ ತಂದು ಶಾಸಕರಿಗೆ ಹಾಗೂ ಕುಟುಂಬಸ್ಥರಿಗೆ ಸಮಾಧಾನ ಹೇಳಿ ಉಪಾಹಾರ ಬಡಿಸಿದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next