Advertisement

ದುಡ್ಡು ಕೊಟ್ರೆ ಕಾಚದಲ್ಲೂ ಓಡ್ತಾನೆ ಅಂದಿದ್ರು …

10:09 AM Feb 02, 2020 | Lakshmi GovindaRaj |

ದರ್ಶನ್‌ ಮಾತಿನ ಶೈಲಿಯೇ ಹಾಗೆ. ತಮಗೆ ಅನಿಸಿದ್ದನ್ನು ನೇರವಾಗಿ ಹೇಳಿಬಿಡುತ್ತಾರೆ. ಅದು ಖುಷಿ, ಬೇಸರ ಏನೇ ಇರಬಹುದು. ಅದನ್ನು ಮನಸ್ಸಲ್ಲಿಟ್ಟುಕೊಂಡು ಕೊರಗುವ ಜಾಯಮಾನ ಅವರದ್ದಲ್ಲ. ದರ್ಶನ್‌ ಯಾವುದಾದರೂ ಕಾರ್ಯಕ್ರಮಕ್ಕೆ ಹೋದರೆ ತಮಗೆ ಅನಿಸಿದ್ದನ್ನು ನೇರವಾಗಿ ಹೇಳುತ್ತಾರೆ.

Advertisement

ಇತ್ತೀಚೆಗೆ ನಡೆದ “ಮುಂದುವರೆದ ಅಧ್ಯಾಯ’ ಚಿತ್ರದ ಟ್ರೇಲರ್‌ ರಿಲೀಸ್‌ ವೇದಿಕೆಯಲ್ಲೂ ದರ್ಶನ್‌, ಕಲಾವಿದದರು ಪಾತ್ರಕ್ಕೆ ತಯಾರಾಗಬೇಕಾದ ರೀತಿಯ ಜೊತಗೆ ಒಂದು ಸಮಯದಲ್ಲಿ ತಮಗೆ ಕೆಲವರು ಗೇಲಿ ಮಾಡಿದ್ದನ್ನು ನೆನಪಿಸಿಕೊಂಡರು. “ಆದಿತ್ಯ ಒಳ್ಳೆಯ ನಟ. ಆತ ಪಾತ್ರಕ್ಕಾಗಿ ತುಂಬಾ ಚೆನ್ನಾಗಿ ಮೋಲ್ಡ್‌ ಆಗುತ್ತಾನೆ.

ಅದು “ಡೆಡ್ಲಿ ಸೋಮ’ದಲ್ಲೇ ಸಾಬೀತಾಗಿದೆ. ದರ್ಶನ್‌ಗೆ ದುಡ್ಡು ಕೊಟ್ರೆ ಕಾಚದಲ್ಲೂ ಓಡ್ತಾನೆ ಅಂತ ಗೇಲಿ ಮಾಡಿದ್ರು ಕೆಲವರು. ಪಾತ್ರಕ್ಕಾಗಿ ಮಾಡೋದರಲ್ಲಿ ತಪ್ಪಿಲ್ಲ’ ಎನ್ನುತ್ತಲೇ ಆದಿತ್ಯ ಹಾಗೂ ತಮ್ಮ ನಡುವಿನ ಸ್ನೇಹದ ಬಗ್ಗೆ ಹೇಳಿಕೊಂಡರು. “ನಾವಿಬ್ಬರು ಸಿನಿಮಾದಾಚೆಗಿನ ಸ್ನೇಹಿತರು. ಇವತ್ತಿಗೂ ನಾವಿಬ್ಬರು ಸೇರಿದಾಗ ಚಿತ್ರರಂಗದ ಬಗ್ಗೆ ಮಾತನಾಡೋದಿಲ್ಲ.

ಅವತ್ತಿನ ಸ್ನೇಹವನ್ನು ಇವತ್ತಿಗೂ ಉಳಿಸಿಕೊಂಡು ಬಂದಿದ್ದೇವೆ. ಫ್ರೆಂಡ್‌ಶಿಪ್‌ ಮಾಡೋದು ಸುಲಭ. ಆದರೆ, ಅದನ್ನು ಉಳಿಸಿಕೊಂಡು, ಬೆಳೆಸಿಕೊಂಡು, ಹೊಂದಿಕೊಂಡು ಹೋಗೋದು ಕಷ್ಟ. ಆದರೆ, ನನ್ನ ಹಾಗೂ ಆದಿ ಸ್ನೇಹ ಇವತ್ತಿಗೂ ಹಾಗೇ ಇದೆ’ ಎನ್ನುತ್ತಾ “ಮುಂದುವರೆದ ಅಧ್ಯಾಯ’ ಚಿತ್ರಕ್ಕೆ ಶುಭಕೋರಿದರು ದರ್ಶನ್‌.

Advertisement

Udayavani is now on Telegram. Click here to join our channel and stay updated with the latest news.

Next