Advertisement

ಪಶ್ಚಿಮ ಬಂಗಾಲ : ವಿಚಾರಣಾಧೀನ ಕೈದಿ ಆಸ್ಪತ್ರೆಯಲ್ಲಿ ಸಾವು

12:39 PM Apr 02, 2018 | udayavani editorial |

ಕೃಷ್‌ನಗರ್‌, ಪಶ್ಚಿಮ ಬಂಗಾಲ : ಸುಧಾರಣಾ ಗೃಹಕ್ಕೆ ಸೇರಿಸಲ್ಪಟ್ಟಿದ್ದ  38 ವರ್ಷ ಪ್ರಾಯದ ವಿಚಾರಣಾಧೀನ ಕೈದಿ ಪ್ರದೀಪ್‌ ಬಂದೋಪಾಧ್ಯಾಯ ಅನಾರೋಗ್ಯದಿಂದಾಗಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

Advertisement

ಕ್ರಿಮಿನಲ್‌ ಕೇಸ್‌ ಸಂಬಂಧ ಕಳೆದ ಮಾರ್ಚ್‌ 16ರಂದು ಬಂಧಿಸಲ್ಪಟ್ಟಿದ್ದ ಬಂದೋಪಾಧ್ಯಾಯ ಅನಾರೋಗ್ಯಕ್ಕೆ ಗುರಿಯಾಗಿ ಕೆಲ ದಿನಗಳ ಹಿಂದೆ ಶಕ್ತಿನಗರ ಆಸ್ಪತ್ರೆಗೆ ದಾಖಲಾಗಿದ್ದು ನಿನ್ನೆ ಮೃತಪಟ್ಟರೆಂದು ಪೊಲೀಸರು ತಿಳಿಸಿದ್ದಾರೆ.

ಅಸ್ತಮಾ ಕಾಯಿಲೆಯಿಂದ ಬಳಲುತ್ತಿದ್ದ ಬಂದೋಪಾಧ್ಯಾಯ ನಾದಿಯಾ ಜಿಲ್ಲೆಯ ರಾಣಾಘಾಟ್‌ ಪೊಲೀಸ್‌ ಠಾಣೆ ವ್ಯಾಪ್ತಿಯ ಅನೂಲಿಯಾ ಗ್ರಾಮಕ್ಕೆ ಸೇರಿದವರಾಗಿದ್ದು ಅವರನ್ನು ಕಲ್ಯಾಣಿ ಜೆಎನ್‌ಎಂ ಆಸ್ಪತ್ರೆಗೆ ಸೇರಿಸಲಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next