Advertisement

ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

02:50 PM Jun 30, 2019 | Vishnu Das |

ಥಾಣೆ: ವಿಚಾರಣೆ ವೇಳೆ ಆರೋಪಿಯು ನೇರ ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಘಟನೆ ಥಾಣೆ ನ್ಯಾಯಾಲಯದಲ್ಲಿ ಸಂಭವಿಸಿದೆ. ಚಪ್ಪಲಿಯು ನ್ಯಾಯಾಧೀಶರ ಬಲ ಹೆಗಲ ಮೇಲೆ ಬಿದ್ದಿದ್ದು, ಆರೋಪಿಯು ನ್ಯಾಯಾಂಗವನ್ನು ನಿಂದಿಸಿದ್ದಾರೆ. ಆರೋಪಿಯ ವಿರುದ್ಧ ಸರ‌ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ್ದಕ್ಕಾಗಿ ಥಾಣೆ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಹೆಚ್ಚುವರಿ ಜಿಲ್ಲೆ ಮತ್ತು ಥಾಣೆ ನ್ಯಾಯಾಲಯದ ಸೆಶಸ್ತ್ರ ನ್ಯಾಯಾಧೀಶ ರಾಜೇಶ್‌ ಗುಪ್ತಾ ಅವರ ನೇತೃತ್ವದಲ್ಲಿ ವಿಚಾರಣೆ ವೇಳೆ ಆರೋಪಿ ಗಣೇಶ್‌ ಗಾಯಕ್ವಾಡ್‌ನ‌ನ್ನು ನ್ಯಾಯಾಲಯದಲ್ಲಿ ಹಾಜರಿಪಡಿಸಲಾಯಿತು. ಈ ವೇಳೆ ನ್ಯಾಯಾಧೀಶರು “ನಿಮ್ಮ ವಕೀಲರು ಬಂದಿದ್ದಾರಾ?’ ಎಂದು ಕೇಳಿದರು. ನ್ಯಾಯಾಧೀಶರು ಕೇಳಿದ ಪ್ರಶ್ನೆಗೆ, ನೀವೇ ನನಗೆ ವಕೀಲರನ್ನು ನೀಡಿದ್ದು, ಅವರು ವಿಚಾರಣೆ ವೇಳೆ ಬರುತ್ತಿಲ್ಲ, ಎಂದು ಆರೋಪಿ ಉತ್ತರಿಸಿದ. “ನಿಮಗೆ ಇನ್ನೊಬ್ಬ ವಕೀಲರನ್ನು ನೀಡುತ್ತೇನೆ, ಮುಂದಿನ ತಾರೀಕಿನಲ್ಲಿ ಪ್ರಕರಣದ ವಿಚಾರಣೆ ನಡೆಸುವ ಎಂಬ ನ್ಯಾಯಾಧೀಶರ ಹೇಳಿಕೆಯ ಅನಂತರ ಗಣೇಶ್‌ ತನ್ನ ಚಪ್ಪಲ್‌ ತೆಗೆದುಕೊಂಡು ನ್ಯಾಯಾಧೀಶರಿಗೆ ಎಸೆದಿದ್ದ. ಈ ವೇಳೆ ಭದ್ರತೆಯಲ್ಲಿದ್ದ ಪೊಲೀಸರು ಗಣೇಶನನ್ನು ವಶಕ್ಕೆ ತೆಗೆದುಕೊಂಡರು. ನ್ಯಾಯಾಧೀಶರ ಆದೇಶದ ಅನಂತರ ಥಾಣೆ ನಗರ ಪೊಲೀಸ್‌ ಠಾಣೆಯಲ್ಲಿ ಆರೋಪಿಯ ವಿರುದ್ಧ ದೂರು ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next