Advertisement

ಜೈಲು ಆವರಣದ ನೀರಿನ ಟಾಂಕಿಗೆ ಜಿಗಿದು ಕೈದಿ ಆತ್ಮಹತ್ಯೆ

12:28 PM Dec 06, 2017 | Team Udayavani |

ಶಹಜಹಾನ್‌ಪುರ, ಉತ್ತರ ಪ್ರದೇಶ : ಇಲ್ಲಿನ ಜಿಲ್ಲಾ ಬಂಧೀಖಾನೆಯಲ್ಲಿ ವಿಚಾರಣಾಧೀನ ಕೈದಿಯೋರ್ವ ಜೈಲು ಆವರಣದೊಳಗಿನ ನೀರಿನ ಟಾಂಕಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. 

Advertisement

ಮೃತ ವಿಚಾರಣಾಧೀನ ಕೈದಿಯನ್ನು ಲಾಲು (35) ಎಂದು ಗುರುತಿಸಲಾಗಿದೆ. ಈತ ತನ್ನ ಮಗಳನ್ನು ಕೊಂದ ಆರೋಪದಲ್ಲಿ ಜೈಲು ಪಾಲಾಗಿದ್ದ ಎಂದು ಬಂಧೀಖಾನೆಯ ಸುಪರಿಂಟೆಂಡ್‌ ರಾಕೇಶ್‌ ಕುಮಾರ್‌ ಹೇಳಿದ್ದಾರೆ. 

ವಿಚಾರಣಾಧೀನ ಕೈದಿ ಲಾಲು ಈ ವರ್ಷ ಮೇ 10ರಂದು ತನ್ನ ಅಪ್ರಾಪ್ತ ವಯಸ್ಸಿನ ಮಗಳನ್ನು ಕೊಂದಿದ್ದ. ಆ ಬಗ್ಗೆ ತನಿಖೆ ನಡೆಯುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next