Advertisement

ಭಾರತ ತಂಡಕ್ಕೆ ಮರಳುವುದೇ ಗುರಿ: ಉನಾದ್ಕತ್‌

10:30 PM Mar 13, 2020 | Team Udayavani |

ರಾಜ್‌ಕೋಟ್‌: ಸೌರಾಷ್ಟ್ರಕ್ಕೆ ಮೊದಲ ರಣಜಿ ಪ್ರಶಸ್ತಿ ತಂದಿತ್ತ ಹಿರಿಮೆ ನಾಯಕ ಜೈದೇವ್‌ ಉನಾದ್ಕತ್‌ ಅವರದಾಗಿದೆ. ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಅವರು, ಭಾರತ ತಂಡಕ್ಕೆ ಮರಳುವುದೇ ತನ್ನ ಗುರಿ ಎಂದು ಹೇಳಿದ್ದಾರೆ.

Advertisement

“ಟೀಮ್‌ ಇಂಡಿಯಾದಲ್ಲಿ ಮತ್ತೆ ಕಾಣಿಸಿಕೊಳ್ಳುವ ಕನಸು ನನ್ನದು. ಈ ರಣಜಿ ಋತುವಿನುದ್ದಕ್ಕೂ ಫಿಟ್‌ನೆಸ್‌ ಕಾಯ್ದುಕೊಳ್ಳುವ ಮೂಲಕ ಫಾರ್ಮ್ ತೋರ್ಪಡಿಸಿದ್ದೇನೆ. ವೇಗದ ಬೌಲರ್‌ ಓರ್ವನಿಗೆ ಫಿಟ್‌ನೆಸ್‌ ಯಾವತ್ತೂ ದೊಡ್ಡ ಸವಾಲು. ಆದರೆ ಇದರಲ್ಲಿ ನಾನು ಯಶಸ್ವಿಯಾಗಿದ್ದೇನೆ’ ಎಂದು 28ರ ಹರೆಯದ ಉನಾದ್ಕತ್‌ ಹೇಳಿದರು.

ಉನಾದ್ಕತ್‌ 2018ರಲ್ಲಿ ಕೊನೆಯ ಸಲ ಭಾರತವನ್ನು ಪ್ರತಿನಿಧಿಸಿದ್ದರು. ಅದು ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಯಾಗಿತ್ತು. ಏಕೈಕ ಟೆಸ್ಟ್‌ ಪಂದ್ಯವನ್ನು 2010ರಲ್ಲಿ, 7ನೇ ಹಾಗೂ ಕೊನೆಯ ಏಕದಿನ ಪಂದ್ಯವನ್ನು 2013ರಲ್ಲಿ ಆಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next