Advertisement

ರಣಜಿ ಫೈನಲ್ ಪಂದ್ಯದ ಮಧ್ಯದಲ್ಲೇ ಅಂತಾರಾಷ್ಟ್ರೀಯ ಖ್ಯಾತಿಯ ಅಂಪಾಯರ್ ಔಟ್

08:55 AM Mar 11, 2020 | keerthan |

ರಾಜಕೋಟ್: ರಣಜಿ ಕೂಟದ ಫೈನಲ್ ಹಣಾಹಣಿ ಇಲ್ಲಿನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ನ ಮೈದಾನದಲ್ಲಿ ನಡೆಯುತ್ತಿದ್ದು, ಪಂದ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಂಪಾಯರ್ ಹೊರಬಿದ್ದಿದ್ದಾರೆ.

Advertisement

ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕಾರ್ಯ ನಿರ್ವಹಿಸಿದ್ದ ಅನುಭವಿ ಅಂಪಾಯರ್ ಸಿ ಶಂಶುದ್ದೀನ್ ಫೈನಲ್ ಪಂದ್ಯದ ಮುಂದಿನ ದಿನದ ಆಟಗಳಿಗೆ ಲಭ್ಯವಿರುವುದಿಲ್ಲ.

ಮೊದಲ ದಿನದ ಆಟದಲ್ಲಿ ಅಂಪಾಯರಿಂಗ್ ನಡೆಸುತ್ತಿದ್ದ ಶಂಶುದ್ದೀನ್ ಅವರ ಕೆಳ ಹೊಟ್ಟೆಯ ಭಾಗಕ್ಕೆ ಚೆಂಡು ಬಡಿದಿತ್ತು. ಇದರಿಂದಾಗಿ ಶಂಶುದ್ದೀನ್ ಆಗಲೇ ಮೈದಾನ ತೊರೆದಿದ್ದರು. ಹೆಚ್ಚುವರಿ ಅಂಪಾಯರ್ ಎಸ್ ರವಿ ನಂತರ ಮೈದಾನಕ್ಕಿಳಿದಿದ್ದರು.

ಸೋಮವಾರ ರಾತ್ರಿ ಶಂಶುದ್ದೀನ್ ಅವರಿಗೆ ನೋವು ಜಾಸ್ತಿಯಾದ ಕಾರಣ ಮಂಗಳವಾರ ಬೆಳಿಗ್ಗೆ ಅವರನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಶಂಶುದ್ದೀನ್ ಬದಲು ಯಶವಂತ್ ಬರ್ಡೆ ಬುಧವಾರ ಪಂದ್ಯಕ್ಕೆ ಲಭ್ಯರಾಗಲಿದ್ದಾರೆ.

ಪ್ರಶಸ್ತಿಗಾಗಿ ಸೌರಾಷ್ಟ್ರ ಮತ್ತು ಬಂಗಾಲ ತಂಡಗಳು ಸೆಣಸಾಡುತ್ತಿದೆ. ಮೊದಲು ಬ್ಯಾಟಿಂಗ್ ನಡೆಸುತ್ತಿರುವ ಸೌರಾಷ್ಟ್ರ 146 ಓವರ್ ವೇಳೆ 349 ರನ್ ಗಳಿಸಿ ಆರು ವಿಕೆಟ್ ಕಳೆದುಕೊಂಡಿದೆ. ಅರ್ಪಿತ್ ವಸವಾಡ ಶತಕ ಗಳಿಸಿ ಔಟಾದರೆ, ಚೇತೇಶ್ವರ ಪೂಜಾರ ಅರ್ಧಶತಕ ಬಾರಿಸಿ ಬ್ಯಾಟಿಂಗ್ ನಡೆಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next