Advertisement

ನಾಟ್ ಔಟ್ ಎಂದ ರಾಹುಲ್: ಕೆ.ಎಲ್. ಕ್ರೀಡಾ ಸ್ಪೂರ್ತಿಗೆ ಅಂಪೈರ್ ಖುಷ್ 

07:43 AM Jan 05, 2019 | Team Udayavani |

ಸಿಡ್ನಿ : ಪ್ರಸ್ತುತ ನಡೆಯುತ್ತಿರುವ ಆಸ್ಟ್ರೇಲಿಯಾ ಸರಣಿಯಲ್ಲಿ ಕಳಪೆ ಬ್ಯಾಟಿಂಗ್ ನಿಂದಲೇ ಸುದ್ದಿಯಾಗಿದ್ದ ಕೆ.ಎಲ್. ರಾಹುಲ್ ಈಗ ಒಳ್ಳೆಯ ವಿಷಯವೊಂದಕ್ಕೆ ಸುದ್ದಿಯಾಗುತ್ತಿದ್ದಾರೆ.  ಅದ್ಭುತ ಕ್ಯಾಚ್ ಪಡೆದರೂ ಕ್ಯಾಚ್ ಹಿಡಿಯುವಾಗ ಚೆಂಡು ನೆಲಕ್ಕೆ ತಾಗಿದೆ ಎಂದು ಅಂಪೈರ್ ಗೆ ಹೇಳುವ ಮೂಲಕ ಕ್ರೀಡಾ ಸ್ಪೂರ್ತಿ ಮೆರೆದಿದ್ದಾರೆ. 

Advertisement


ಸಿಡ್ನಿ ಪಂದ್ಯದ ಮೂರನೇ ದಿನದಾಟದಲ್ಲಿ ರವೀಂದ್ರ ಜಡೇಜಾ ಬೌಲಿಂಗ್ ಗೆ ಬ್ಯಾಟಿಂಗ್ ಮಾಡುತ್ತಿದ್ದ ಆಸೀಸ್ ಆರಂಭಿಕ ಆಟಗಾರ ಮಾರ್ಕಸ್ ಹ್ಯಾರಿಸ್ ಹೊಡೆದ ಚೆಂಡನ್ನು ರಾಹುಲ್ ಡೈವ್ ಹೊಡೆದು ಆಕರ್ಷಕ ರೀತಿಯಲ್ಲಿ ಹಿಡಿದಿದ್ದರು. ಈ ವೇಳೆ ಬೌಲರ್ ಜಡೇಜಾ ಸೇರಿದಂತೆ ಭಾರತೀಯ ಆಟಗಾರರು ಮೊದಲ ವಿಕೆಟ್ ಪಡೆದ ಖುಷಿಯಲ್ಲಿ ಸಂಭ್ರಮಿಸಿದ್ದರು. ಆದರೆ ತಕ್ಷಣ ಕೆ.ಎಲ್.ರಾಹುಲ್ ಚೆಂಡು ನೆಲಕ್ಕೆ ತಾಗಿದೆ, ಔಟ್ ಇಲ್ಲ ಎಂದು ಸನ್ನೆ ಮಾಡಿದರು. 


ಕನ್ನಡಿಗನ ಕ್ರೀಡಾ ಸ್ಪೂರ್ತಿಗೆ ಅಂಪೈರ್ ಇಯಾನ್ ಗೂಲ್ಡ್ ಮೆಚ್ಚುಗೆ ಸೂಚಿಸಿದ್ದಾರೆ. ಮೂರನೇ ದಿನದ ಅಂತ್ಯಕ್ಕೆ ಆಸ್ಟ್ರೇಲಿಯಾ 6 ವಿಕೆಟ್ ಕಳೆದುಕೊಂಡು 236 ರನ್ ಗಳಿಸಿದೆ. ಭಾರತ 386 ರನ್ ಗಳ ಬೃಹತ್ ಮುನ್ನಡೆ ಹೊಂದಿದೆ. ಆಸೀಸ್ ಪರ ಮಾರ್ಕಸ್ ಹ್ಯಾರಿಸ್ ಗರಿಷ್ಠ  79 ರನ್ ಗಳಿಸಿದರೆ, ಭಾರತದ ಕುಲದೀಪ್ ಯಾದವ್  3 ವಿಕೆಟ್ ಪಡೆದು ಮಿಂಚಿದರು. 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next