Advertisement

ಶಿರಸಿ : ವಿದ್ವಾನ್ ಉಮಾಕಾಂತ ಭಟ್ಟ ಕೆರೇಕೈ ರಿಗೆ ವಿದ್ಯಾ ವಾಚಸ್ಪತಿ ಪದವಿ

10:25 PM Jul 09, 2022 | Team Udayavani |

ಶಿರಸಿ : ನಾಡಿನ ಹೆಸರಾಂತ ವಿದ್ವಾಂಸರಾದ ವಿದ್ವಾನ್ ಉಮಾಕಾಂತ ಭಟ್ಟ ಕೆರೇಕೈ ಅವರಿಗೆ ಬೆಂಗಳೂರಿನ ರಾಜ ಭವನದಲ್ಲಿ ಕರ್ನಾಟಕ ವಿಶ್ವ ವಿದ್ಯಾಲಯ ನೀಡುವ ವಿದ್ಯಾ ವಾಚಸ್ಪತಿ ಪದವಿಯನ್ನು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಶನಿವಾರ ಪ್ರದಾನ ಮಾಡಿದರು.

Advertisement

ಬೆಂಗಳೂರಿ‌ನಲ್ಲಿರುವ ಕರ್ನಾಟಕ ಸಂಸ್ಕೃತ ವಿಶ್ವ ವಿದ್ಯಾಲಯ ನೀಡುವ ಪ್ರತಿಷ್ಠಿತ ವಿದ್ಯಾ ವಾಚಸ್ಪತಿ ಪದವಿಗೆ ಬಹುಭಾಷಾ ಪಂಡಿತ, ಪ್ರಸಿದ್ಧ ತಾಳಮದ್ದಲೆ ಅರ್ಥದಾರಿ, ಮೇಲುಕೋಟೆ‌ ಸಂಸ್ಕೃತ‌ ಮಹಾವಿದ್ಯಾಲಯದ ಪ್ರಾಚಾರ್ಯರಾಗಿ ಸೇವೆ‌ ಸಲ್ಲಿಸಿ ನಿವೃತ್ತರಾಗಿದ್ದ ಕೆರೇಕೈ ಅವರು ಆಯ್ಕೆಯಾಗಿದ್ದರು.

ಅನೇಕ ಪತ್ರಿಕೆ ಅಂಕಣಕಾರರಾಗಿ, ಕೃತಿಕಾರರಾಗಿ ಕೂಡ ಪರಿಚಿತರು. ಉಮಾಕಾಂತರು ಸಂಸ್ಕೃತ ಕ್ಷೇತ್ರದಲ್ಲಿ ಸಲ್ಲಿಸಿದ‌ ಅಸಮಾನ್ಯ‌ ಸೇವೆಗೆ ಈ ಪದವಿ ಲಭಿಸಿದೆ.

ಇದನ್ನೂ ಓದಿ : ಕುಳಗೇರಿ ಕ್ರಾಸ್: ಚಿರತೆಯ ಹೆಜ್ಜೆ ಗುರುತು ಪತ್ತೆ, ಗ್ರಾಮಸ್ಥರಲ್ಲಿ ಆತಂಕ

Advertisement

Udayavani is now on Telegram. Click here to join our channel and stay updated with the latest news.

Next