Advertisement

ಮೋದಿ ಸಚಿವ ಸಂಪುಟ ಪುನಾರಚನೆ: ಉಮಾ, ರೂಡಿ ರಾಜೀನಾಮೆ

11:56 AM Sep 01, 2017 | udayavani editorial |

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರ ಸಚಿವ ಸಂಪುಟ ಇಂದು ಮಹತ್ತರ ಬದಲಾವಣೆ ಕಾಣಲಿದ್ದು ಅದಕ್ಕೆ ಪೂರ್ವ ಭಾವಿಯಾಗಿ ರಾಜೀನಾಮೆ ನೀಡಿರುವ ನಾಲ್ಕು ಪ್ರಮುಖ ಹಾಲಿ ಸಚಿವರುಗಳ ಪೈಕಿ ಉಮಾ ಭಾರ್ತಿ ಮತ್ತು ರಾಜೀವ್‌ ಪ್ರತಾಪ್‌ ರೂಡಿ ಸೇರಿದ್ದಾರೆ. 

Advertisement

ಹಲವಾರು ರಾಜ್ಯ ವಿಧಾನಸಭಾ ಚುನಾವಣೆಗಳು ಹಾಗೂ ಆ ಬಳಿಕ ನಡೆಯಲಿರುವ 2019ರ ಮಹಾ ಚುನಾವಣೆಗೆ ಸಿದ್ಧತೆಯ ರೂಪದಲ್ಲಿ ಸಚಿವ ಸಂಪುಟದಲ್ಲಿ ಹೊಸ ತರುಣ ಮುಖಗಳನ್ನು ಸೇರಿಸಿಕೊಳ್ಳುವ ಉದ್ದೇಶ ಪ್ರಧಾನಿ ನರೇಂದ್ರ ಮೋದಿ ಅವರದ್ದಾಗಿದೆ. 

ಎನ್‌ಡಿಎ ಗೆ ಈಚೆಗೆ ಸೇರ್ಪಡೆಗೊಂಡ ಬಿಹಾರ ಮುಖ್ಯ ಮಂತ್ರಿ ನಿತೀಶ್‌ ಕುಮಾರ್‌ ಯಾದವ್‌ ಷವರ ಜೆಡಿಯ ಇದರ ಕನಿಷ್ಠ ಇಬ್ಬರು ಸದಸ್ಯರಿಗೆ ಮೋದಿ ಸಚಿವ ಸಂಪುಟದಲ್ಲಿ ಸ್ಥಾನ ಸಿಗಲಿದೆ. 

ನಿನ್ನೆ ತಡರಾತ್ರಿ ರಾಜೀನಾಮೆ ನೀಡಿರುವ ಇನ್ನಿಬ್ಬರು ಸಚಿವರೆಂದರೆ ಕೃಷಿ ಸಚಿವ ರಾಧಾ ಮೋಹನ್‌ ಸಿಂಗ್‌ ಮತ್ತು ಕೇಂದ್ರ ಸಹಾಯಕ ಸಚಿವ ಸಂಜೀವ ಬಲ್ಯಾನ್‌. ಮೂಲಗಳ ಪ್ರಕಾರ ಫ‌ಗ್ಗನ್‌ ಸಿಂಗ್‌ ಕುಲಸ್ಥೆ, ಕಾಲರಾಜ್‌ ಮಿಶ್ರಾ ಅವರು ಕೂಡ ತಮ್ಮ ಸಚಿವ ಪದಕ್ಕೆ ರಾಜೀನಾಮೆ ನೀಡುವ ಸಾಧ್ಯತೆಗಳಿವೆ. 

ತಮಿಳು ನಾಡಿನ ಆಳುವ ಎಐಎಡಿಎಂಕೆ ಪಕ್ಷ ಕೇಂದ್ರ ಸಂಪುಟದಲ್ಲಿ ತನ್ನ ಸದಸ್ಯರಿಗೆ ಸಚಿವ ಸ್ಥಾನ ಸಿಗುವ ವರದಿಗಳನ್ನು ನಿರಾಕರಿಸಿದೆ. 

Advertisement

ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ನಿನ್ನೆ ರಾಜೀನಾಮೆ ನೀಡಿರುವ ಕೇಂದ್ರ ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಅನಂತರ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಭೇಟಿಯಾಗಿದ್ದಾರೆ. 

ಈಚೆಗೆ ನಿರಂತರ ರೈಲು ಅವಘಡಗಳಿಂದ ಮನನೊಂದು ರಾಜೀನಾಮೆಗೆ ಮುಂದಾಗಿದ್ದು ಪ್ರಧಾನಿ ಮೋದಿ ಅವರಿಂದ ತತ್ಕಾಲಕ್ಕೆ ತಡೆಯಲ್ಪಟ್ಟಿದ್ದ ರೈಲ್ವೇ ಸಚಿವ ಸುರೇಶ್‌ ಪ್ರಭು ಅವರ ಸ್ಥಾನಕ್ಕೆ ಬೇರೊಬ್ಬ ವ್ಯಕ್ತಿಯನ್ನು ಸಚಿವರನ್ನಾಗಿ ನೇಮಿಸುವ ಸಾಧ್ಯತೆ ಇದೆ. 

ಉಪರಾಷ್ಟ್ರಪತಿಯಾಗಿ ಚುನಾಯಿತರಾಗಿ ತಮ್ಮ ಸಚಿವ ಪದವನ್ನು ತೆರವು ಗೊಳಿಸಿರುವ ವೆಂಕಯ್ಯ ನಾಯ್ಡು ಅವರ ಸ್ಥಾನವನ್ನು ಸದ್ಯಕ್ಕೆ ಹರ್ಷ ವರ್ಧನ್‌ಗೆ ಹೆಚ್ಚುವರಿಗೆ ಯಾಗಿ ನೀಡಲಾಗಿತ್ತು. ಇದೀಗ ಆ ಸಚಿವ ಪದ ಬೇರೊಬ್ಬರಿಗೆ ದಕ್ಕಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next