Advertisement

ಮಾತನಾಡುವ ಮಹಾಲಿಂಗ: ಉಳ್ತೂರು ಮಹಾಲಿಂಗೇಶ್ವರ ದೇವಸ್ಥಾನ

04:23 PM Mar 11, 2021 | Team Udayavani |

ತೆಕ್ಕಟ್ಟೆ: ಕುಂದಾಪುರ ತಾಲೂಕಿನ ಉಳ್ತೂರು ಗ್ರಾಮ ಮತ್ತದರ ಸುತ್ತಲಿನ ಪ್ರದೇಶದ ಜನರ ಆರಾಧ್ಯ ಮೂರ್ತಿ, ಎತ್ತರದ ಜಾಗದಲ್ಲಿ ನೆಲೆನಿಂತ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರು ಮಾತನಾಡುವ ಮಹಾಲಿಂಗ ಎಂದೇ ಪ್ರಖ್ಯಾತ. ದೇವರ ಮುಂದೆ ನಿಂತು ಗಟ್ಟಿ ಧ್ವನಿಯಲ್ಲಿ ಕೋರಿಕೆಗಳನ್ನು ಹೇಳಿಕೊಳ್ಳುತ್ತ ಪ್ರಾರ್ಥನೆ ಸಲ್ಲಿಸಿದರೆ ಇಷ್ಟಾರ್ಥಗಳನ್ನೆಲ್ಲ ಈಡೇರಿಸುತ್ತಾನೆ ಎನ್ನುವ ಕಾರಣಕ್ಕಾಗಿ ಮಾತನಾಡುವ ಮಹಾಲಿಂಗ ಎನ್ನುವ ಹೆಸರು ಬಂದಿದೆ.

Advertisement

ಈ ಶಿವಾಲಯದ ಗರ್ಭಗುಡಿ ಇರುವುದು ಬೃಹದಾಕಾರದ ಬಂಡೆಯ ಮೇಲೆ. ಹಾಗಾಗಿ ಹಿಂದೆಲ್ಲ ಊರಲ್ಲಿ ಯಾರಾದರೂ ಏನಾದರೂ ತಪ್ಪು ಮಾಡಿದಾಗ ಅರೆಕಲ್ಲ ಮೇಲೆ ಕೂತವ ನೋಡುತ್ತಾನೆ ಎನ್ನುತ್ತಿದ್ದರು.

ಇದನ್ನೂ ಓದಿ:ಈ ಶಿವಲಿಂಗಕ್ಕೆ ವರ್ಷದ ಎರಡು ಬಾರಿ ಮಾತ್ರ ಪೂಜೆ! ಹೆಬ್ರಿ ಸೀತಾನದಿಯಲ್ಲಿದೆ ಈ ಉದ್ಭವ ಲಿಂಗ

ಈ ದೇವಸ್ಥಾನದ ಪುರಾತತ್ವದ ಬಗ್ಗೆ 800- 900 ವರ್ಷಗಳ ಹಿಂದಿನ ಶಿಲಾ ಶಾಸನಗಳು ಸಾಕ್ಷಿ‌ ನೀಡಿದೆ. ಮಹಾಲಿಂಗನನ್ನು ನಂಬಿ ಬಂದವರಿಗೆ ಇಲ್ಲಿಯ ತನಕ ಒಳಿತಷ್ಟೇ ಆಗಿದೆ. ದೇವರನ್ನೇ ಧಿಕ್ಕರಿಸಿದ ಮಂದಿ ಅದರ ಪರಣಾಮಗಳನ್ನು ಎದುರಿಸಿ ಮತ್ತೇ ದೇವರ‌ ಮುಂದೆ ಮಂಡಿ ಊರಿ ಒಳಿತನ್ನು ಕಂಡಿದ್ದಾರೆ ಎನ್ನುವುದು ಭಕ್ತರ ನಂಬಿಕೆ.

Advertisement

ಇದನ್ನೂ ಓದಿ: ಶಿವ ಸೃಷ್ಟಿ, ಸ್ಥಿತಿ, ಲಯಗಳ ಕಾರಣಿಕರ್ತ

ಎತ್ತರದಲ್ಲಿರುವ ಕೆಲವೇ ಕೆಲವು ಶಿವನ ದೇವಾಲಯಗಳಲ್ಲಿ ಈ ದೇವಸ್ಥಾನ ಕೂಡ ಒಂದು. ಆಗಮ ಶಾಸ್ತ್ರಗಳಂತೆ ಮೂರು ಸಮಯಗಳಲ್ಲಿ ಬಲಿ ಪೂಜೆ ಪಡೆಯುವ ಮಹಾಲಿಂಗೇಶ್ವರ ಅತ್ಯಂತ ಶಕ್ತಿದಾಯಕ.

ಇದನ್ನೂ ಓದಿ: ರುದ್ರಾಕ್ಷಿ ರೂಪದ ಕೋಟಿ ಶಿವಲಿಂಗ; ಇದು ಪ್ರಸಿದ್ಧ ಕೋಟೇಶ್ವರದ ಕೋಟಿಲಿಂಗೇಶ್ವರ ಸನ್ನಿಧಿ

ರಾಷ್ಟ್ರೀಯ ಹೆದ್ದಾರಿಯ ತೆಕ್ಕಟ್ಟೆಯಿಂದ 3 ಕಿ.ಮೀ ಉತ್ತರಕ್ಕೆ ಇರುವ ದೇವಾಲಯಕ್ಕೆ ಉತ್ತಮ ರಸ್ತೆಯ ವ್ಯವಸ್ಥೆ‌ ಇದೆ. ತಲುಪುವುದು ಅತ್ಯಂತ ಸುಲಭ.

ಅಜಿತ್ ಶೆಟ್ಟಿ ಕಟ್ಟೆಮನೆ

Advertisement

Udayavani is now on Telegram. Click here to join our channel and stay updated with the latest news.

Next