Advertisement

ಉಳ್ಳಾಲದಲ್ಲಿ ಕಡಲ್ಕೊರೆತ: ಸಮುದ್ರಪಾಲಾದ ಮನೆ

01:39 AM Jun 17, 2020 | Hari Prasad |

ಉಳ್ಳಾಲ: ಉಳ್ಳಾಲದಲ್ಲಿ ಸಮುದ್ರ ಬಿರುಸುಗೊಂಡಿದ್ದು, ಭಾರೀ ಗಾತ್ರದ ಅಲೆಗಳು ಮನೆಗಳಿಗೆ ಅಪ್ಪಳಿಸುತ್ತಿದ್ದು, ಸೋಮೇಶ್ವರದಲ್ಲಿ ಮೋಹನ್‌ ಅವರಿಗೆ ಸೇರಿದ ಮನೆ ಸಮುದ್ರ ಪಾಲಾಗಿದೆ.

Advertisement

ಸೋಮೇಶ್ವರ ರುದ್ರಪಾದೆ ಸನಿಹದ ಮೀನುಗಾರ ಮೋಹನ್‌ ಅವರಿಗೆ ಸೇರಿದ ಮನೆ ಕಳೆದ ಬಾರಿ ಕಡಲ್ಕೊರೆತಕ್ಕೆ ಭಾಗಶಃ ಹಾನಿಯಾಗಿತ್ತು.

ಕಳೆದ ಕೆಲವು ದಿನಗಳಿಂದ ಸಮುದ್ರದ ಅಲೆಗಳಿಗೆ ತತ್ತರಿಸಿದ್ದ ಮನೆ ಬಿರುಕು ಬಿಟ್ಟಿದ್ದು ಮಂಗಳವಾರ ಮಾಲಕರ ಕಣ್ಣೆದುರೇ ಸಮುದ್ರ ಪಾಲಾಗಿದೆ.

ಸೋಮೇಶ್ವರ ಉಚ್ಚಿಲ, ಉಳ್ಳಾಲದ ಕಿಲೇರಿಯಾ ನಗರ, ಕೈಕೋ, ಸೀಗ್ರೌಂಡ್‌ ಮುಂತಾದ ಕಡೆ ಭಾರೀ ಗಾತ್ರದ ಅಲೆಗಳು ಮನೆಗಪ್ಪಳಿಸುತ್ತಿದ್ದು 20ಕ್ಕೂ ಹೆಚ್ಚು ಮನೆಗಳು ಅಪಾಯದಲ್ಲಿವೆ.

ಕಾಮಗಾರಿ ವಿಳಂಬದಿಂದ ಹಾನಿ: ಉಳ್ಳಾಲದಲ್ಲಿ ಎಡಿಬಿ ವತಿಯಿಂದ ನಡೆದ ಶಾಶ್ವತ ಕಾಮಗಾರಿ ಉಳ್ಳಾಲ ಮೊಗವೀರಪಟ್ಣವರೆಗೆ ಮಾತ್ರ ನಡೆದಿದ್ದು, ಸಮ್ಮರ್‌ ಸ್ಯಾಂಡ್‌ ಬಳಿಯಿಂದ ಸೀ ಗ್ರೌಂಡ್‌ವರೆಗೆ ಇನ್ನೊಂದು ಯೋಜನೆಯಡಿ ಶಾಶ್ವತ ಕಾಮಗಾರಿ ಅರ್ಧದಲ್ಲಿ ಇರುವುದರಿಂದ ಸಮಸ್ಯೆಯಾಗಿದೆ.

Advertisement

ಸೋಮೇಶ್ವರ ಉಚ್ಚಿಲದಲ್ಲಿ ನಡೆಯುತ್ತಿರುವ ಶಾಶ್ವತ ಕಾಮಗಾರಿ ವಿಳಂಬದಿಂದ ನ್ಯೂ ಉಚ್ಚಿಲ, ಬಟ್ಟಪ್ಪಾಡಿ ಸೇರಿದಂತೆ ವಿವಿಧೆಡೆ ಕಡಲ್ಕೊರೆತದ ಸಮಸ್ಯೆ ಉಂಟಾಗಿದೆ. ಕಳೆದೆರಡು ದಿನಗಳಿಂದ ಸಮುದ್ರ ಬಿರುಸುಗೊಂಡಿದ್ದು ಕೊರೆತ ಮುಂದುವರಿಯುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next