Advertisement

KSCA ಚಾಂಪಿಯನ್ಸ್‌ ಟ್ರೋಫಿ :ಉಲ್ಲಾಳ ತಂಡಕ್ಕೆ ಕ್ರಿಕೆಟ್‌ ಪ್ರಶಸ್ತಿ

10:15 AM Mar 16, 2018 | Team Udayavani |

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ ಆಶ್ರಯದಲ್ಲಿ ಕರ್ನಾಟಕದ ವಿವಿಧ ವಲಯಗಳ ಚಾಂಪಿಯನ್‌ ತಂಡಗಳಿಗಾಗಿ ಜರಗಿದ ವಿಶೇಷ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಮಾರುತಿ ಪ್ರಾಯೋಜಿತ ಉಲ್ಲಾಳ ಕ್ರಿಕೆಟ್‌ ಅಕಾಡೆಮಿ ತಂಡ ಟ್ರೋಫಿಯನ್ನೆತ್ತಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜರಗಿದ 50 ಓವರುಗಳ ಅಂತಿಮ ಪಂದ್ಯದಲ್ಲಿ ಉಲ್ಲಾಳ ತಂಡ ಬೆಂಗಳೂರಿನ ಚಿಂತಾಮಣಿ ನ್ಪೋರ್ಟ್ಸ್ ಅಸೋಸಿಯೇಷನ್‌ ತಂಡವನ್ನು 70 ರನ್‌ಗಳಿಂದ ಸೋಲಿಸಿತು. ಈ ಮೂಲಕ ಮಂಗಳೂರು ವಲಯ ಪ್ರಥಮ ಬಾರಿಗೆ ಈ ಮಹತ್ತರ ಸಾಧನೆಯನ್ನು ಮಾಡಿದ ಹೆಗ್ಗಳಿಕೆಗೆ ಪಾತ್ರವಾಯಿತು. 

Advertisement

ಅಂತಿಮ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸಿದ ಉಲ್ಲಾಳ ತಂಡ 5 ವಿಕೆಟಿಗೆ 299 ರನ್‌ ಪೇರಿಸಿತು. ನಿಶಿತ್‌ರಾಜ್‌ 118 ರನ್‌ ಬಾರಿಸಿ ಮಿಂಚಿದರು (7 ಬೌಂಡರಿ, 2 ಸಿಕ್ಸರ್‌). ಆದಿತ್ಯ ರೈ ಅಜೇಯ 92 ರನ್‌ ಮಾಡಿದರು. ಜವಾಬಿತ್ತ ಚಿಂತಾಮಣಿ ತಂಡ 45ನೇ ಓವರಿನಲ್ಲಿ 229 ರನ್‌ಗಳಿಗೆ ಆಲೌಟ್‌ ಆಯಿತು. ಉಲ್ಲಾಳ ಪರವಾಗಿ ಅಡ್ರಿಕ್‌ 49ಕ್ಕೆ 3, ನಿಶಿತ್‌ರಾಜ್‌ 52ಕ್ಕೆ  2, ಕಿರಣ್‌ ಕ್ಲಿಂಟನ್‌ 52ಕ್ಕೆ 2, ಆದಿತ್ಯ ರೈ 31ಕ್ಕೆ 2 ವಿಕೆಟ್‌ ಉರುಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next