Advertisement

Ullal ; ಕಲ್ಲಿಗೆ ಬಡಿದ ದೋಣಿ; ಮೀನುಗಾರ ಸಾವು

12:32 AM Jan 13, 2024 | Team Udayavani |

ಉಳ್ಳಾಲ : ಮೀನುಗಾರಿಕೆಗೆ ತೆರಳಿದ್ದ ದೋಣಿಯ ಹಗ್ಗ ತುಂಡಾಗಿ ಸಮುದ್ರದ ನಡುವೆ ಕಲ್ಲೊಂದಕ್ಕೆ ಬಡಿದು ಮೀನುಗಾರರೊಬ್ಬರು ಮೃತಪಟ್ಟ ಘಟನೆ ಮೊಗವೀರಪಟ್ಣ ಸಮೀಪದ ಆಳ ಸಮುದ್ರದಲ್ಲಿ ನಡೆದಿದೆ.

Advertisement

ಮೊಗವೀರಪಟ್ಣ ನಿವಾಸಿ ಮೈಕಲ್‌ ಮೃತಪಟ್ಟವರು. ನಾಡದೋಣಿಯಲ್ಲಿ ಮೈಕಲ್‌ ಸೇರಿದಂತೆ ಮೂವರು ಮೀನುಗಾರಿಕೆಗೆ ತೆರಲಿದ್ದು. ಸಮುದ್ರದ ನಡುವೆ ಬಂಡೆಯೊಂದರ ಸಮೀಪ ಮೀನು ಹಿಡಿಯಲು ಬಲೆ ಬೀಸಿ ಕುಳಿತಿದ್ದರು. ಈ ಸಂದರ್ಭದಲ್ಲಿ ಬೀಸಿದ ಗಾಳಿಗೆ ಹಗ್ಗ ತುಂಡಾಗಿ ದೂಣಿ ನೇರವಾಗಿ ಕಲ್ಲಿಗೆ ಬಡಿಯಿತು.

ಇದರಿಂದಾಗಿ ದೋಣಿಯ ಎಂಜಿನ್‌ ಚಾಲನೆ ಮಾಡುತ್ತಿದ್ದ ಮೈಕಲ್‌ ತಲೆ ದೋಣಿಯ ಮರದ ತುಂಡಿಗೆ ಬಡಿದು ಸಮುದ್ರಕ್ಕೆ ಬಿದ್ದಿದ್ದು, ಸಹ ಮೀನುಗಾರರು ಮೈಕಲ್‌ ಅವರನ್ನು ಮೇಲಕ್ಕೆತ್ತಿದರೂ ಅದಾಗಲೇ ಅವರು ಮೃತಪಟ್ಟಿದ್ದರು.

ಮೃತದೇಹವನ್ನು ಬೇರೆ ಮೀನುಗಾರಿಕಾ ಬೋಟ್‌ನ ಸಹಾಯದಿಂದ ದಡಕ್ಕೆ ತರಲಾಗಿದೆ. ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next