Advertisement

ಉಳ್ಳಾಲ: ತಾಯಿಗೆ ಬೈದ ವಿಚಾರ; ಯುವಕನಿಗೆ ತಲವಾರಿನಿಂದ ಹಲ್ಲೆ

08:20 PM Apr 29, 2022 | Team Udayavani |

ಉಳ್ಳಾಲ:ನೀರು ಸರಬರಾಜು ಮಾಡುವ ಟ್ಯಾಂಕರ್ ಡ್ರೈವರ್ ತಾಯಿಗೆ ಬೈದ ವಿಚಾರದಲ್ಲಿ ವಿಚಾರಿಸಲು ಹೋದ ಚೆಂಬುಗುಡ್ಡೆಯ ಯುವಕನಿಗೆ ಡ್ರೈವರ್ ತಲವಾರಿನಿಂದ ಹಲ್ಲೆ ನಡೆಸಿದ್ದು, ಗಾಯಗೊಂಡಿರುವ ಯುವಕನನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ಚೆಂಬುಗುಡ್ಡೆ ನಿವಾಸಿ ರಿಝ್ವಾನ್ ತಲವಾರು ದಾಳಿಯಿಂದ ಗಾಯಗೊಂಡಿದ್ದು, ಉಳ್ಳಾಲ ಬಸ್ತಿಪಡ್ಪು ನಿವಾಸಿ ಖಲೀಲ್ ತಲವಾರಿನಿಂದ ದಾಳಿ ನಡೆಸಿದ ಆರೋಪಿ.

ಉಳ್ಳಾಲ ನಗರಸಭೆಯಿಂದ ನೀರಿನ ಗುತ್ತಿಗೆ ಪಡೆದಿದ್ದ ಟ್ಯಾಂಕರ್ ನಲ್ಲಿ ತೊಕ್ಕೊಟ್ಟು ಚೆಂಬುಗುಡ್ಡೆ ಬಳಿ ನೀರು ಸರಬರಾಜು ಮಾಡುತ್ತಿದ್ದಾಗ ಖಲೀಲ್ ಮಹಿಳೆಯೊಬ್ಬರಿಗೆ ಅವ್ಯಾಚ ಶಬ್ದದಿಂದ ಬೈದಿದ್ದು, ಈ ವಿಚಾರದಲ್ಲಿ ಮಹಿಳೆಯ ಪುತ್ರ ಚೆಂಬುಗುಡ್ಡೆ ನಿವಾಸಿ ರಿಝ್ವಾನ್ ಉಳ್ಳಾಲದ ನೀರು ತುಂಬಿಸುವ ಬಾವಿ ಬಳಿ ತೆರಳಿದ್ದು ಮಾತಿನ ಚಕಮಕಿ ನಡೆದು ಖಲೀಲ್ ರಿಝ್ವಾನ್ ಮೇಲೆ ತಲವಾರಿನಿಂದ ದಾಳಿ‌ ನಡೆಸಿದ್ದಾನೆ.

ಗಾಯಗೊಂಡಿದ್ದ ರಿಝ್ವಾನ್ ನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಅಪಾಯದಿಂದ ಪಾರಾಗಿದ್ದಾನೆ. ಖಲೀಲ್ ನ ವಿರುದ್ದ ಈ ಹಿಂದೆಯೂ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next