Advertisement

ರಫೇಲ್‌: ಉತ್ತರಾಖಂಡ ಕಾಂಗ್ರೆಸ್‌, ಬಿಜೆಪಿ ಕಾರ್ಯಕರ್ತರ ಮಾರಾಮಾರಿ

12:13 PM Dec 20, 2018 | Team Udayavani |

ಡೆಹರಾಡೂನ್‌ : ರಫೇಲ್‌ ಡೀಲ್‌ ವಿಷಯಕ್ಕೆ ಸಂಬಂಧಿಸಿ ಬಿಜೆಪಿ ಮತ್ತು ಕಾಂಗ್ರೆಸ್‌ ಕಾರ್ಯಕರ್ತರು ಇಲ್ಲಿನ ಕಾಂಗ್ರೆಸ್‌ ಭವನದಲ್ಲಿ ಹೊಡೆದಾಡಿಕೊಂಡರೆಂದು ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

Advertisement

ಕಾಂಗ್ರೆಸ್‌ ಭವನದಲ್ಲಿ ಪಕ್ಷದ ನಾಯಕಿ ಕುಮಾರಿ ಸೇಲಜಾ ಅವರು ರಫೇಲ್‌ ಡೀಲ್‌ ಕುರಿತಾಗಿ ಸುದ್ದಿಗೋಷ್ಠಿ ನಡೆಸುವವರಿದ್ದರು. ಒಂದು ನಿಮಿಷ ಮುನ್ನ ಬಿಜೆಪಿ ಕಾರ್ಯಕತರರು ಭವನಕ್ಕೆ ನುಗ್ಗಿ ಬಂದು ಪೋಸ್ಟರ್‌ ಗಳನ್ನು ಬ್ಯಾನರ್‌ಗಳನ್ನು ಹರಿದು ಹಾಕಿದರು. ಇದಕ್ಕೆ ಪ್ರತಿರೋಧಿಸಿದ ಕಾಂಗ್ರೆಸ್‌ ಕಾರ್ಯಕರ್ತರೊಂದಿಗೆ ಜಗಳವಾಡಿದರು ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ. 

ಪೊಲೀಸರು ತಡೆಯಲೆತ್ನಿಸಿದಾಗ ಬಿಜೆಪಿ ಕಾರ್ಯಕರ್ತರು ಅವರೊಂದಿಗೂ ಜಗಳವಾಡಿದರು ಎಂದು ಪ್ರದೇಶ್‌ ಕಾಂಗ್ರೆಸ್‌ ಅಧ್ಯಕ್ಷ ಪ್ರೀತಂ ಸಿಂಗ್‌ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next