Advertisement

Ujire: ಲಾಡ್ಜ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ

12:56 AM Sep 13, 2023 | Team Udayavani |

ಬೆಳ್ತಂಗಡಿ: ಉಜಿರೆಯ ಖಾಸಗಿ ಲಾಡ್ಜ್ ವೊಂದರಲ್ಲಿ ಬಾಡಿಗೆಗೆ ಕೊಠಡಿ ಪಡೆದಿದ್ದ ವ್ಯಕ್ತಿಯೊಬ್ಬರು ನೇಣಿಗೆ ಶರಣಾದ ಘಟನೆ ನಡೆದಿದೆ.

Advertisement

ಸಚಿನ್‌ ತಲವಾಡೆ ಮೃತರು. ಸೆ. 9ರಂದು ತಾನು ಒಬ್ಬನೇ ಇರುವುದಾಗಿ ತಿಳಿಸಿ ಡಬಲ್‌ ಬೆಡ್‌ ರೂಂ ಪಡೆದು ನೆಲೆಸಿದ್ದರು. ಸೆ. 10ರಂದು ಸಂಜೆ 7 ಗಂಟೆಗೆ ರೂಮ್‌ಬಾಯ್‌ ತಿಲಕ್‌ ಅವರು ರೂಮಿನ ಬಳಿ ತೆರಳಿ ಬಾಗಿಲು ಬಡಿದರೂ ತೆರೆಯದ ಕಾರಣ ಕಿಟಕಿಯಲ್ಲಿ ಇಣುಕಿ ನೋಡಿದಾಗ ವ್ಯಕ್ತಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆಗೈದಿರುವುದು ಕಂಡುಬಂದಿದೆ.

ಅಂತೆಯೇ ಲಾಡ್ಜ್ ಕಡೆಯಿಂದ ಬೆಳ್ತಂಗಡಿ ಠಾಣೆಗೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next