Advertisement

ಉಜಿರೆ: ವೈದ್ಯರ ದಿನ

03:15 AM Jul 03, 2017 | Karthik A |

ಬೆಳ್ತಂಗಡಿ: ಬೆನಕ ಹೆಲ್ತ್‌ ಸೆಂಟರ್‌ ಉಜಿರೆಯಲ್ಲಿ ವೈದ್ಯರ ದಿನಾಚರಣೆಯ ಪ್ರಯುಕ್ತ ಶನಿವಾರ ಉಜಿರೆಯ ಹಿರಿಯ ವೈದ್ಯ ಡಾ| ಕೆ.ಎನ್‌. ಶೆಣೈ ಅವರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಬೆನಕ ಹೆಲ್ತ್‌ ಸೆಂಟರ್‌ನ ವೈದ್ಯಕೀಯ ನಿರ್ದೇಶಕ ಡಾ| ಗೋಪಾಲಕೃಷ್ಣ ಇವರು ಡಾ| ಶೆಣೈ ಇವರು ಸಮಾಜಕ್ಕೆ ನೀಡಿದ ಸೇವೆಯನ್ನು ಸ್ಮರಿಸಿದರು. ಇದೇ ವೇಳೆ ಶ್ವಾಸಕೋಶ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ಮುಂಡಾಜೆಯ ಚೆನ್ನ ಇವರಿಗೆ 14,000 ರೂ. ಚಿಕಿತ್ಸೆಯನ್ನು ಬೆನಕ ಆಸ್ಪತ್ರೆ ವತಿಯಿಂದ ಉಚಿತವಾಗಿ ನೀಡಲಾಯಿತು. ಯಾವುದೇ ವೈದ್ಯರು ರೋಗಿಗೆ ತೊಂದರೆ ಆಗಬೇಕೆಂದು ಬಯಸುವುದಿಲ್ಲ. ಮತ್ತು ಚಿಕಿತ್ಸೆಗಾಗಿ ಬಂದ ರೋಗಿ ಗುಣಮುಖನಾಗಿ ಹೋಗಬೇಕೆಂದು ಸೇವೆಯನ್ನು ನೀಡುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ವೈದ್ಯ ಮೇಲೆ ಆಗುತ್ತಿರುವ ಹಲ್ಲೆ ವಿಷಾದನೀಯ ಎಂದು ಆತಂಕ ವ್ಯಕ್ತಪಡಿಸಿದರು. ವೇದಿಕೆಯಲ್ಲಿ  ಡಾ| ಭಾರತಿ, ಡಾ| ಚಾರುಲತಾ, ಡಾ| ಸಂಗೀತಾ ಮತ್ತು ಡಾ| ಅಂಕಿತ ಉಪಸ್ಥಿತರಿದ್ದರು. ಸಾರ್ವಜನಿಕ ಸಂಪರ್ಕಾಧಿಕಾರಿ ಎಸ್‌. ಜಿ.  ಭಟ್‌ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next