Advertisement

29ಕ್ಕೆ  ಸರ್ಜಿಕಲ್‌ ಸ್ಟ್ರೈಕ್‌ ಡೇ;ಆಚರಣೆ ನಿರಾಕರಿಸಿದ ಮಮತಾ ಸರ್ಕಾರ

12:47 PM Sep 21, 2018 | Team Udayavani |

ಕೋಲ್ಕತಾ: ಸೆಪ್ಟೆಂಬರ್‌ 29 ರಂದು ಸರ್ಜಿಕಲ್‌ ಸ್ಟ್ರೈಕ್‌ ದಿನಾಚರಣೆ ಆಚರಿಸಲು ವಿಶ್ವವಿದ್ಯಾಲಯಗಳಿಗೆ ಯುಜಿಸಿ ನಿರ್ದೇಶನ ನೀಡಿದೆ. ಆದರೆ ಪಶ್ಚಿಮ ಬಂಗಾಳ ಸರ್ಕಾರ ಈ ದಿನಾಚರಣೆಯನ್ನು ರಾಜ್ಯದಲ್ಲಿ ಆಚರಿಸಲು ನಿರಾಕರಿಸಿದೆ.

Advertisement

ರಾಜ್ಯದಲ್ಲಿ ಸರ್ಜಿಕಲ್‌ ಸ್ಟ್ರೈಕ್‌ ದಿನಾಚರಣೆಯನ್ನು ಆಚರಿಸುವುದಿಲ್ಲ ಎಂದು ಸಚಿವ ಪಾರ್ಥ ಚಟರ್ಜಿ ಹೇಳಿಕೆ ನೀಡಿದ್ದಾರೆ.

ಕೇಂದ್ರ ಬಿಜೆಪಿ ನೇತೃತ್ವದ ಸರ್ಕಾರ ಸೈನ್ಯವನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ರಾಜಕೀಯ ಮಾಡುತ್ತಿದೆ.ಚುನಾವಣೆಗೂ ಮುನ್ನ ದುರುದ್ದೇಶದಿಂದ  ಈ ಕೆಲಸ ಮಾಡುತ್ತಿದೆ ಎಂದು ಕಿಡಿ ಕಾರಿದರು. 

ಇದರಲ್ಲಿ ರಾಜಕೀಯ ಇಲ್ಲ, ದೇಶ ಭಕ್ತಿಯೇ ವಿಷಯ ಎಂದು ಕೇಂದ್ರ ಎಚ್‌ಆರ್‌ಡಿ ಸಚಿವ ಪ್ರಕಾಶ್‌ ಜಾವ್‌ಡೇಕರ್‌ ಹೇಳಿಕೆ ನೀಡಿದ್ದಾರೆ. 

2016 ರ ಸೆಪ್ಟೆಂಬರ್‌ 29 ರಂದು ಭಾರತೀಯ ವೀರ ಯೋಧರು ಗಡಿ ದಾಟಿ ಹಲವು ಉಗ್ರರನ್ನು ಸಂಹರಿಸಿ ವಾಪಾಸಾಗಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next