Advertisement

ಉಡುಪಿ: ಎಟಿಎಂ ಒಡೆಯಲು ಯತ್ನಿಸಿದ 19 ವರ್ಷದ ಯುವಕನ ಬಂಧನ

07:47 PM Apr 08, 2022 | Team Udayavani |

ಉಡುಪಿ: ಅಂಬಾಗಿಲು-ಪೆರಂಪಳ್ಳಿ ಕ್ರಾಸ್ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಎಟಿಎಂ ಒಡೆಯಲು ಯತ್ನಿಸಿದ ವಿಜಯನಗರದ 19 ವರ್ಷದ ಯುವಕನನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.

Advertisement

ಬಂಧಿತ ಆರೋಪಿ ಹಗರಿಬೊಮ್ಮನಹಳ್ಳಿಯ ಬೆಣ್ಣೆಕಲ್ಲು ನಿವಾಸಿ ಹನುಮಂತ ಎನ್ನುವವನಾಗಿದ್ದಾನೆ.

ಮಾರ್ಚ್ 07 – 08 ರ ಮಧ್ಯ ರಾತ್ರಿ ಅಂಬಾಗಿಲು- ಪೆರಂಪಳ್ಳಿ ಕ್ರಾಸ್‌ನ ಕೆನರಾ ಬ್ಯಾಂಕ್‌ ಎಟಿಎಂ ನಲ್ಲಿರುವ ಹಣವನ್ನು ಕಳವು ಮಾಡುವ ಉದ್ದೇಶದಿಂದ ಎಟಿಎಂ ಲಾಕರ್‌ ಡೋರನ್ನು ಮುರಿಯಲಾಗಿತ್ತು.

ಎಟಿಎಂನ ಲಾಕರ್ ಬಾಗಿಲು ತೆರೆದಿದ್ದು ಯಾರೋ ಒಬ್ಬರು ಅದನ್ನು ಒಡೆಯಲು ಯತ್ನಿಸಿದ್ದನ್ನು ಗಮನಿಸಿದ ಉಡುಪಿ ಮತ್ತು ಮಂಗಳೂರಿನ ಕೆನರಾ ಬ್ಯಾಂಕ್‌ ಎಟಿಎಂ ಶಾಖೆಗಳಿಗೆ ಹಣವನ್ನು ತುಂಬಿಸುವ ಕೆಲಸ ಮಾಡುತ್ತಿದ್ದ ಏಜೆನ್ಸಿಯ ಜನರಲ್ ಮ್ಯಾನೇಜರ್ ಈ ಬಗ್ಗೆ ದೂರು ದಾಖಲಿಸಿದ್ದರು.

ಪೊಲೀಸ್‌ ಅಧೀಕ್ಷಕರಾದ ವಿಷ್ಣುವರ್ಧನ್ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ಸಿಬ್ಬಂದಿ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next