Advertisement

Udupi: ನಾಳೆ ಶ್ರೀ ಪುರಂದರದಾಸರ ಆರಾಧನಾ ಮಹೋತ್ಸವ

12:11 AM Feb 08, 2024 | Team Udayavani |

ಉಡುಪಿ: ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠದ ಆಶ್ರಯದಲ್ಲಿ ಫೆ. 9ರಂದು ಶ್ರೀ ಪುರಂದರದಾಸರ ಆರಾಧನಾ ಮಹೋತ್ಸವ ನಡೆಯಲಿದೆ.

Advertisement

ಬೆಳಗ್ಗೆ 9.30ಕ್ಕೆ ಮಧ್ವಮಂಟಪದಲ್ಲಿ ಕಾತ್ಯಾಯಿನಿ ವಿಪ್ರ ಭಜನ ಮಂಡಳಿಯ ಸದಸ್ಯರಿಂದ ಭಜನೆ, ಅಪರಾಹ್ನ 3ಕ್ಕೆ ರಾಜಾಂಗಣದಲ್ಲಿ ಮಣಿಪಾಲ ಸುಗುಣಶ್ರೀ ಭಜನ ಮಂಡಳಿಯಿಂದ “ಶ್ರೀ ಪುರಂದರ ವಿಟ್ಠಲ” ಶತಕಂಠ ಗಾಯನ, ಸಂಜೆ 4.30ಕ್ಕೆ ರಥಬೀದಿ ಯಲ್ಲಿ ಪುರಂದರದಾಸರ ಕೃತಿಗಳ ಶೋಭಾಯಾತ್ರೆ, 5.30ಕ್ಕೆ ರಾಜಾಂಗಣದಲ್ಲಿ ವಿ| ವೆಂಕಟ ನರಸಿಂಹಾಚಾರ್‌ ಜೋಷಿ ಹುಬ್ಬಳ್ಳಿ ಅವರಿಂದ “ಪುರಂದರೋಪನಿಷತ್‌’ ವಿಶೇಷ ಪ್ರವಚನ ನೆರವೇರಲಿದೆ.

ಸಂಜೆ 6.30 ಗಂಟೆಗೆ ನಡೆಯುವ ಪುರಂದರದಾಸರ ಕೀರ್ತನೆಗಳ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ, ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶ ರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀ ಪಾದರು, ಶ್ರೀ ಸುಶ್ರೀಂದ್ರತೀರ್ಥ ಶ್ರೀ ಪಾದರು ಅನುಗ್ರಹ ಸಂದೇಶ ನೀಡು ವರು. 7ಕ್ಕೆ ಹಿಂದೂಸ್ತಾನಿ ಗಾಯಕ ಪ್ರದೀಪ್‌ ಸಪ್ತಸ್ವರ ಕುಕ್ಕುಡೆ ಮತ್ತು ಬಳಗದವರಿಂದ ಭಕ್ತಿ ಸಂಗೀತ ಜರಗ ಲಿದೆ ಎಂದು ಶ್ರೀ ಪುತ್ತಿಗೆ ಮಠದ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next