Advertisement

Udupi: ಅಧಿಕ ಲಾಭಾಂಶದ ಆಮಿಷ; ಲಕ್ಷಾಂತರ ರೂ.ವಂಚನೆ

08:55 PM Oct 08, 2024 | Team Udayavani |

ಉಡುಪಿ: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಅಧಿಕ ಹಣ ದೊರಕಿಸಿಕೊಡುವುದಾಗಿ ತಿಳಿಸಿ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂ.ವಂಚಿಸಿ ಹಣ ವರ್ಗಾವಣೆ ಮಾಡಿಸಿಕೊಂಡ ಘಟನೆ ನಡೆದಿದೆ.

Advertisement

ಅಬ್ದುಲ್‌ ರಫಿಯತ್‌ ಅವರ ವಾಟ್ಸಾಪ್‌ ಸಂಖ್ಯೆಗೆ WEBISDOM ಎಂಬ ವಾಟ್ಸಾಪ್‌ ಗ್ರೂಪ್‌ ಲಿಂಕ್‌ ಬಂದಿದೆ. ಅದಕ್ಕೆ ಜಾಯಿನ್‌ ಆದ ಬಳಿಕ ಗ್ರೂಪ್‌ನಲ್ಲಿ ಷೇರು ಮಾರುಕಟ್ಟೆ ಟ್ರೇಡಿಂಗ್‌ ಬಗ್ಗೆ ಮಾಹಿತಿ ಲಭಿಸುತ್ತಿತ್ತು. ಹೆಚ್ಚಿನ ಹಣ ಸಿಗುತ್ತದೆ ಎಂಬ ಆಸೆ ಹೊಂದಿದ್ದ ಅವರು ಷೇರು ಮಾರುಕಟ್ಟೆ ಟ್ರೇಡಿಂಗ್‌ನಲ್ಲಿ 16,78,500 ರೂ.ಗಳನ್ನು ವರ್ಗಾಯಿಸಿಕೊಂಡಿದ್ದರು. ಆದರೆ ಪಾವತಿ ಮಾಡಿದ ಹಣವನ್ನಾಗಲೀ ಅಥವಾ ಷೇರು ಟ್ರೇಡಿಂಗ್‌ನಲ್ಲಿ ಬಂದ ಲಾಭಾಂಶವನ್ನಾಗಲಿ ನೀಡದೆ ವಂಚಕರು ಮೋಸ ಎಸಗಿದ್ದಾರೆ. ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next