Advertisement

ಉಡುಪಿ ತೆಂಕನಿಡಿಯೂರಿನ ಗರಡಿಮಜಲು ಪೊಲೀಸ್ ಕ್ವಾಟ್ರಸ್ ಸೀಲ್ ಡೌನ್

06:04 PM May 24, 2020 | keerthan |

ಉಡುಪಿ: ಜಿಲ್ಲೆಯ ಅಜೆಕಾರು ಪೊಲೀಸ್ ಠಾಣೆಯ ಎಎಸ್ ಐ ಅವರಿಗೆ ಕೋವಿಡ್-19 ಸೋಂಕು ದೃಢವಾದ ಹಿನ್ನಲೆಯಲ್ಲಿ ತೆಂಕನಿಡಿಯೂರು ಗ್ರಾಮದ ಗರಡಿಮಜಲು ಎಂಬಲ್ಲಿನ ಎರಡು ಪೊಲೀಸ್ ಕ್ವಾಟ್ರಸ್ ಗಳನ್ನು ಸೀಲ್ ಡೌನ್ ಮಾಡಲಾಗಿದ್ದು, ಪ್ರದೇಶವನ್ನು ಕಂಟೈನ್ ಮೆಂಟ್ ಏರಿಯಾವನ್ನಾಗಿ  ಮಾಡಲಾಗಿದೆ.

Advertisement

ಇಲ್ಲಿ ಎ, ಬಿ, ಸಿ ಎಂದು ಮೂರು ಕ್ವಾಟ್ರಸ್ ಬ್ಲಾಕ್ ಗಳಿದ್ದು ಅವುಗಳಲ್ಲಿ ಬಿ ಮತ್ತು ಸಿ ಬ್ಲಾಕ್ ಗಳನ್ನು ಸೀಲ್ ಡೌನ್ ಮಾಡಲಾಗಿದೆ.  ಈ ಪ್ರದೇಶದಲ್ಲಿ ಸುಮಾರು 12 ಮನೆಗಳಿದ್ದು, ಅದರಲ್ಲಿ ಏಳು ಮನೆಗಳಲ್ಲಿ ಜನವಸತಿ ಇದೆ ಎನ್ನಲಾಗಿದೆ. ಇವರಿಗೆ ಮುಂದಿನ 16 ದಿನಗಳ ಕಾಲ ಕ್ವಾರಂಟೈನ್ ನಲ್ಲಿ ಇರುವಂತೆ ಸೂಚಿಸಲಾಗಿದೆ. ಸುತ್ತಲಿನ ಒಂದು ಕಿ.ಮೀ ಪ್ರದೇಶವನ್ನು ಬಫರ್ ಝೋನ್ ಎಂದು ಘೋಷಿಸಲಾಗಿದೆ.

ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ ಜಿಲ್ಲೆಯಲ್ಲಿ ಒಟ್ಟು 23 ಪ್ರಕರಣಗಳು ದೃಢವಾಗಿದೆ. ಇದರಲ್ಲಿ ಕಾರ್ಕಳ, ಅಜೆಕಾರು ಮತ್ತು ಬ್ರಹ್ಮಾವರ ಠಾಣೆಯ ತಲಾ ಓರ್ವ ಪೊಲೀಸ್ ಸಿಬ್ಬಂದಿಗೆ ಸೋಂಕು ದೃಢವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next